‘ಚಾಮುಂಡೇಶ್ವರಿ’ ಫಲಿತಾಂಶ : ಸಿದ್ದರಾಮಯ್ಯ ಗೆಲುವು
ಮೈಸೂರು : ತೀವ್ರ ಕುತೂಹಲ ಕೆರಳಿಸಿದ್ದ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಜಯಗಳಿಸಿದ್ದಾರೆ.
ನಗರದ ಮಹಾರಾಣಿ ಕಲಾ ಕಾಲೇಜಿನಲ್ಲಿ ಗುರುವಾರ ಬೆಳಗ್ಗೆ ಆರಂಭಗೊಂಡ 27ಸುತ್ತುಗಳ ಮತಎಣಿಕೆ ಮುಕ್ತಾಯಗೊಂಡಿದ್ದು, ಸಿದ್ದರಾಮಯ್ಯ ಜಯಮಾಲೆಯನ್ನು ಧರಿಸಿದ್ದಾರೆ.
13ನೇ ಸುತ್ತಿನಲ್ಲಿ ಜೆಡಿಎಸ್ನ ಶಿವಬಸಪ್ಪ, ಕಾಂಗ್ರೆಸ್ನ ಸಿದ್ದರಾಮಯ್ಯ ಅವರಿಗಿಂತಲೂ 1681ಮತಗಳ ಅಂತರದಿಂದ ಮುಂದಿದ್ದರು. ನಂತರದ ಸುತ್ತುಗಳಲ್ಲಿ ಸಿದ್ದರಾಮಯ್ಯ ಮುನ್ನಡೆ ಸಾಧಿಸಿದರು. 22ನೇ ಸುತ್ತಿನಲ್ಲಿ 3800ಮತಗಳ ಅಂತರದಿಂದ ಸಿದ್ದರಾಮಯ್ಯ ಮುನ್ನಡೆ ಸಾಧಿಸಿದರು. 26ನೇ ಸುತ್ತಿನಲ್ಲಿ 1600ಮತಗಳ ಅಂತರದಿಂದ ಸಿದ್ದರಾಮಯ್ಯ ಮುನ್ನಡೆ ಸಾಧಿಸಿದ್ದರು.
ಜೆಡಿಯು ಅಭ್ಯರ್ಥಿ ಗುರುಸ್ವಾಮಿ ಠೇವಣೆ ಕಳೆದುಕೊಂಡಿದ್ದಾರೆ. ಮತಎಣಿಕೆ ಕೇಂದ್ರದ ವ್ಯಾಪ್ತಿಯಲ್ಲಿ ವ್ಯಾಪಕ ಬಂದೋಬಸ್ತು ಮಾಡಲಾಗಿತ್ತು. ಅರೆಸೇನಾ ಪಡೆ, ಅಶ್ವದಳ ನಿಯೋಜಿಸಲಾಗಿತ್ತು.
ತೀವ್ರ ಕುತೂಹಲ ಕೆರಳಿಸಿದ್ದ ಕ್ಷೇತ್ರದ ಚುನಾವಣೆ ಫಲಿತಾಂಶ, ರಾಜ್ಯರಾಜಕಾರಣದ ಮೇಲೆ ಯಾವ ಪರಿಣಾಮ ಬೀರುತ್ತದೆಯೋ ಕಾದು ನೋಡಬೇಕು.
(ದಟ್ಸ್ ಕನ್ನಡ ವಾರ್ತೆ)