ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಟ್ಟೆಚ್ಚರದ ನಡುವೆ ದತ್ತ ಜಯಂತಿ : ನೀರಸ ಪ್ರತಿಕ್ರಿಯೆ

By Staff
|
Google Oneindia Kannada News

ಚಿಕ್ಕಮಗಳೂರು : ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್‌ ಆಯೋಜಿತ, ವಿವಾದಿತ ದತ್ತ ಜಯಂತಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸೋಮವಾರ(ಡಿಸೆಂಬರ್‌ 04) ಬಾಬಾಬುಡನ್‌ಗಿರಿಯಲ್ಲಿ ನಡೆದ ದತ್ತ ಪಾದುಕೆ ದರ್ಶನ ಯಾತ್ರೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಜನ ಆಗಮಿಸಿದರು. ತೀವ್ರ ಕಟ್ಟೆಚ್ಚರದ ನಡುವೆ ಯಾತ್ರೆ ಶಾಂತಿಯುತವಾಗಿ ನಡೆಯಿತು.

ಸುಮಾರು 50,000 ದರ್ಶನಾರ್ಥಿಗಳು ಬರಲಿದ್ದಾರೆ ಎಂದು ವಿಹಿಂಪ ಹಾಗೂ ಬಜರಂಗದಳ ಹೇಳಿಕೊಂಡಿದ್ದವು. ಜಿಲ್ಲಾಡಳಿತ ಕನಿಷ್ಠ 30,000ಜನ ಬರಬಹುದು ಎಂದು ಅಂದಾಜು ಮಾಡಿತ್ತು. ಜಿಲ್ಲಾಡಳಿತ, ವಿಹಿಂಪ ಹಾಗೂ ಬಜರಂಗದಳಗಳ ನಿರೀಕ್ಷೆಗಿಂತಲೂ ಅತಿ ಕಡಿಮೆ ಸಂಖ್ಯೆಯಲ್ಲಿ ಜನರು ಪಾಲ್ಗೊಂಡರು.

ಬಜರಂಗದಳದ ರಾಜ್ಯ ಸಂಚಾಲಕ ಮಹೇಂದ್ರಕುಮಾರ್‌ ಮಾತನಾಡಿ, ಜಿಲ್ಲಾಡಳಿತ ವಿಪರೀತ ನಿಬಂಧನೆಗಳನ್ನು ವಿಧಿಸಿದ್ದರಿಂದ ಜನರು ದತ್ತ ಪಾದುಕೆ ದರ್ಶನ ಪಡೆಯಲು ನಿರಾಸಕ್ತಿ ತೋರಿದ್ದಾರೆ. ಮುಂಬರುವ ಫೆಬ್ರವರಿಯಾಳಗೆ ಈ ಕುರಿತು ಜನಜಾಗೃತಿ ಆಂದೋಲನ ನಡೆಸಲಾಗುವುದು ಎಂದು ತಿಳಿಸಿದರು.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X