ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅರವಿಂದರ ಸ್ಮರಣೆ : ಪಾಂಡಿಚೇರಿಯಲ್ಲಿ ಧ್ಯಾನ ಸಮಯ
ಪಾಂಡಿಚೇರಿ : ಇಂದು(ಡಿ.5) ಸಂತ-ತತ್ವಜ್ಞಾನಿ ಶ್ರೀ ಅರವಿಂದರ 56ನೆ ಮಹಾಸಮಾಧಿ ದಿನ. ಚಿರಶಾಂತಿಯಲ್ಲಿ ಪವಡಿಸಿರುವ ದಿವ್ಯಚೇತನಕ್ಕೆ ನಮನ ಸಲ್ಲಿಸುವ ಕ್ಷಣ.
ಅಂತೆಯೇ, ಇಂದು ಪಾಂಡಿಚೇರಿಯ ಶ್ರೀ ಅರವಿಂದ ಆಶ್ರಮಕ್ಕೆ ಅವರ ಅನುಯಾಯಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ಮಹಾಸಮಾಧಿ ನಿಮಿತ್ತ ಇಂದು ಆಶ್ರಮದಲ್ಲಿ ಸಾಮೂಹಿಕ ಧ್ಯಾನಕ್ಕೆ ವ್ಯವಸ್ಥೆಮಾಡಲಾಗಿತ್ತು. ಶ್ರೀ ಅರವಿಂದರು ಮತ್ತು ಮಾತೆ ಬಳಸುತ್ತಿದ್ದ ಕೋಣೆಯನ್ನು ತೆರೆದು ಭಕ್ತಾದಿಗಳ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು.
( ಯುಎನ್ಐ)
Story first published: Tuesday, December 5, 2006, 23:53 [IST]