ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದು ಕ್ಷೇತ್ರ : ಮತದಾನದ ಮಧ್ಯೆ ಚೂರು ಸುದ್ದಿ-ಸ್ವಾರಸ್ಯ!

By Staff
|
Google Oneindia Kannada News
  • 115 ವರ್ಷದ ವಯೋವೃದ್ಧರಾದ ಸಿದ್ದೇಗೌಡ, ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಮತ ಚಲಾಯಿಸಿದರು. ಅವರ ಕೈಗಳು ನಡುಕುತ್ತಿದ್ದ ಕಾರಣ, ಮತಚಲಾವಣೆಗೆ ಸಹಾಯಕರ ನೆರವು ಪಡೆದರು. ಈವರೆಗೆ ಅವರು 31ಚುನಾವಣೆ(ಸ್ಥಳೀಯ ಸಂಸ್ಥೆ ಸೇರಿ)ಯಲ್ಲಿ ಮತಚಲಾಯಿಸಿದ್ದಾರಂತೆ.
  • ಜೆಡಿಎಸ್‌ ಅಭ್ಯರ್ಥಿ ಶಿವಬಸಪ್ಪ ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ಕಾರಣ : ಅವರ ಹೆಸರು ಮೈಸೂರು ವಿಧಾನಸಭೆಯಲ್ಲಿದೆ.
  • ಜೆಡಿಎಸ್‌ನಿಂದ ಬಂಡಾಯವೆದ್ದು, ಜೆಡಿಯುನಿಂದ ಸ್ಪರ್ಧಿಸಿರುವ ಗುರುಸ್ವಾಮಿ, ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮತಚಲಾಯಿಸಿದರು. ಕ್ಷೇತ್ರದಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ಅವರು ಈ ಸಂದರ್ಭದಲ್ಲಿ ಆರೋಪಿಸಿದರು.
  • ಸೋಮವಾರ ಚಾಮುಂಡೇಶ್ವರಿ ವಿಧಾನಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕ ರಜೆ. ಚುನಾವಣೆ ಹಿನ್ನೆಲೆಯಲ್ಲಿ ನಿಷೇಧಾಜ್ಞೆಯಿಂದ ಬಿಕೋ ಎನ್ನುತ್ತಿದ್ದ ರಸ್ತೆಗಳಲ್ಲಿ ಚಿಣ್ಣರು ಕ್ರಿಕೆಟ್‌ ಆಡಿದರು.
(ದಟ್ಸ್‌ ಕನ್ನಡ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X