ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚತುರ್ವೇದಿ ಕಾರ್ಯವೈಖರಿ ಬಗೆಗೆ ಈಶ್ವರಪ್ಪ ಸಿಡಿಮಿಡಿ

By Staff
|
Google Oneindia Kannada News

ಬೆಂಗಳೂರು : ರಾಜ್ಯಪಾಲ ಟಿ.ಎನ್‌.ಚತುರ್ವೇದಿ ಕಾರ್ಯ ವೈಖರಿ ಬಗ್ಗೆ ಬಿಜೆಪಿ ಮುಖಂಡ ಮತ್ತು ಜಲ ಸಂಪನ್ಮೂಲ ಸಚಿವ ಕೆ.ಎಸ್‌.ಈಶ್ವರಪ್ಪ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕಾಂಗ್ರೆಸ್‌ನವರು ನೀಡಿದ ಸುಳ್ಳು ದೂರುಗಳಿಗೆ ರಾಜ್ಯಪಾಲರು ಈ ಪರಿ ಸ್ಪಂದಿಸಬಾರದಿತ್ತು. ಆ ದೂರುಗಳ ಹಿನ್ನೆಲೆಯಲ್ಲಿ ಕೂಡಲೇ ಮುಖ್ಯಮಂತ್ರಿಗಳಿಗೆ ರಾಜ್ಯಪಾಲರು ಪತ್ರ ಬರೆಯುವುದು, ಪ್ರಜಾಪ್ರಭುತ್ವ ಪದ್ಥತಿಗೆ ಶೋಭೆ ತರುವುದಿಲ್ಲ ಎಂದರು.

ಚಾಮುಂಡೇಶ್ವರಿ ಉಪಚುನಾವಣೆ ಬಗ್ಗೆ ವಿವರಣೆ ನೀಡಿದ ಅವರು, ಸಿದ್ದರಾಮಯ್ಯ ಒಂದು ಇರುವೆಗೆ ಸಮಾನ. ಅವರನ್ನು ಸೋಲಿಸಲು ರಾಜ್ಯದ ಬಿಜೆಪಿ ನಾಯಕರೇ ಸಾಕು. ಕಾಂಗ್ರೆಸ್‌ ಗೆಲ್ಲುವ ಕನಸು ಕಾಣಬಹುದಷ್ಟೇ. ಮತದಾರಪ್ರಭು ನೀಡುವ ಫಲಿತಾಂಶ ಏನೆಂಬುದು ನಮಗೆ ತಿಳಿದಿದೆ ಎಂದು ಹೇಳಿದರು.

ಹಿನ್ನೆಲೆ : ಚಾಮುಂಡೇಶ್ವರಿ ಚುನಾವಣೆ ಮುಂದಿಟ್ಟುಕೊಂಡು, ರಾಜ್ಯದ ಅಭಿವೃದ್ಧಿಯನ್ನು ಸರ್ಕಾರ ನಿರ್ಲಕ್ಷಿಸಬಾರದು ಎಂದು ಸೂಚಿಸಿ, ರಾಜ್ಯಪಾಲರು ಎರಡು ಪತ್ರಗಳನ್ನು ಮುಖ್ಯಮಂತ್ರಿಗಳಿಗೆ ಈ ಹಿಂದೆ ಬರೆದಿದ್ದರು. ಆ ಪತ್ರಗಳ ಬಗ್ಗೆ ಈಶ್ವರಪ್ಪ ಅವರಿಗೆ ಅಸಮಾಧಾನ ಉಂಟಾಗಿದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X