ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಸೀದಿ ಧ್ವಂಸ : ಸಂಸತ್ತಿನಲ್ಲಿ ಕ್ಷಮೆ ಯಾಚಿಸಿದ ಆಡ್ವಾಣಿ!
ನವದೆಹಲಿ : ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೊದಲ ಸಲ ಬಿಜೆಪಿ ಅಧ್ಯಕ್ಷ ಮತ್ತು ಮಾಜಿ ಉಪ ಪ್ರಧಾನಿ ಎಲ್.ಕೆ.ಆಡ್ವಾಣಿ ಕ್ಷಮೆ ಯಾಚಿಸಿದ್ದಾರೆ. ಜೊತೆಗೆ ರಾಮ ಜನ್ಮಭೂಮಿ ಆಂದೋಲನದಲ್ಲಿ ಪಾಲ್ಗೊಂಡದ್ದು ನನ್ನ ಪಾಲಿಗೆ ಹೆಮ್ಮೆ ಎಂದಿದ್ದಾರೆ.
ಬುಧವಾರ ಲೋಕಸಭೆಯ ಶೂನ್ಯವೇಳೆಯಲ್ಲಿ ಸಿಪಿಐ ನಾಯಕ ಗುರುದಾಸ್ ದಾಸ್ಗುಪ್ತಾ ಅವರ ಪ್ರಶ್ನೆಯಾಂದಕ್ಕೆ ಆಡ್ವಾಣಿ ಉತ್ತರ ನೀಡಿದರು. ಡಿ.6.1992ರಂದು ನಡೆದ ಬಾಬರಿ ಮಸೀದಿ ಧ್ವಂಸ ಕಾರ್ಯಕ್ಕೆ ಸಂಬಂಧಿಸಿದಂತೆ ಕ್ಷಮೆ ಕೇಳುತ್ತಿದ್ದೇನೆ. ಆದರೆ ಆ ಘಟನೆಯಲ್ಲಿ ನನ್ನದೇನೂ ಪಾತ್ರವಿಲ್ಲ ಎಂದು ಸ್ಪಷ್ಪಪಡಿಸಿದರು.
ನನ್ನ ಬದುಕಿನಲ್ಲಿ ಸಾಕಷ್ಟು ಮಹತ್ವದ ಘಟನೆಗಳು ನಡೆದಿವೆ. ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆ, ಮೊಕದ್ದಮೆಗಳ ಎದುರಿಸುತ್ತಿದ್ದೇನೆ. ಇವೆಲ್ಲವೂ ಸಾರ್ವಜನಿಕ ಬದುಕಿನಲ್ಲಿ ಅಭ್ಯಾಸವಾಗಿದೆ ಎಂದು ಆಡ್ವಾಣಿ ಹೇಳಿದರು.
(ಯುಎನ್ಐ)
Comments
Story first published: Wednesday, November 29, 2006, 23:53 [IST]