ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರದುರ್ಗ : ರಿಕ್ಷಾ-ಬಸ್‌ ಡಿಕ್ಕಿ, ಐವರು ಯುವಕರ ಬಲಿ

By Staff
|
Google Oneindia Kannada News

ಚಿತ್ರದುರ್ಗ : ಬಸ್‌ ಮತ್ತು ಆಟೋ ರಿಕ್ಷಾ ಡಿಕ್ಕಿಯಿಂದ, ಆಟೋದಲ್ಲಿದ್ದ ಐವರು ಯುವ ಪ್ರಯಾಣಿಕರು ಮೃತಪಟ್ಟ ಘಟನೆ ಹೊಳಲ್ಕೆರೆ ಬಳಿ ಮಂಗಳವಾರ ಸಂಭವಿಸಿದೆ.

ಭದ್ರಾವತಿಯಿಂದ ಬಳ್ಳಾರಿ ಕಡೆಗೆ ವೇಗವಾಗಿ ಬರುತ್ತಿದ್ದ ಖಾಸಗಿ ಬಸ್‌, ಆಟೋಕ್ಕೆ ಡಿಕ್ಕಿ ಹೊಡೆದದ್ದರಿಂದ ಅಪಘಾತ ಸಂಭವಿಸಿದೆ. ನತದೃಷ್ಟ ಆಟೋದಲ್ಲಿ ಪ್ರಯಾಣಿಸುತ್ತಿದ್ದವರನ್ನು ದೊಡ್ಡೇಶ್‌(20), ಸುರೇಶ್‌(24), ಮಂಜುನಾಥ್‌(22), ಗಿರೀಶ್‌(20), ಓಬಲೇಶ್‌(25) ಎಂದು ಗುರ್ತಿಸಲಾಗಿದೆ. ಹೊಳಲ್ಕೆರೆಯ ದೇವಸ್ಥಾನಕ್ಕೆ ಆಟೋದಲ್ಲಿ ಇವರುಗಳು ತೆರಳುತ್ತಿದ್ದರು ಎನ್ನಲಾಗಿದೆ.

ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹೊಳಲ್ಕೆರೆ ಆಸ್ಪತ್ರೆಯಲ್ಲಿ ಒಬ್ಬರು ಕೊನೆ ಉಸಿರೆಳೆದರು. ಇನ್ನಿಬ್ಬರು ದಾವಣಗೆರೆ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಐಜಿಪಿ ಎಂ.ಎಫ್‌.ಪಾಷಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X