ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಸಿಯೂಟದ ಅವ್ಯವಹಾರ : ಶಿಕ್ಷಕರಿಬ್ಬರ ಅಮಾನತು
ದಾವಣಗೆರೆ : ಬಿಸಿಯೂಟದ ದವಸಧಾನ್ಯಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಶಿಕ್ಷಕರಿಬ್ಬರನ್ನು ಸೋಮವಾರ ಅಮಾನತು ಮಾಡಲಾಗಿದೆ.
ಕಾವೇರಮ್ಮ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರಾದ ಎಸ್.ಪಿ.ಹಿರೇಮಠ ಹಾಗೂ ಜಿ.ಕರಿಬಸಪ್ಪ ಅಮಾನತುಗೊಂಡವರು. ಇವರಿಬ್ಬರ ಪೈಕಿ ಎಸ್.ಪಿ.ಹಿರೇಮಠ ಎಂಬುವವರು ಶಿಕ್ಷಕರ ಸಂಘದ ಕಾರ್ಯದರ್ಶಿ ಎನ್ನುವುದು ಗಮನಾರ್ಹ.
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಮೂಲಗಳ ಪ್ರಕಾರ, ಇಬ್ಬರೂ ಶಿಕ್ಷಕರು 10ಮೂಟೆ ಅಕ್ಕಿ ಹಾಗೂ ತೊಗರಿ ಬೇಳೆ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ.
(ಯುಎನ್ಐ)
Comments
Story first published: Monday, November 27, 2006, 23:53 [IST]