ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸಿಯೂಟದ ಅವ್ಯವಹಾರ : ಶಿಕ್ಷಕರಿಬ್ಬರ ಅಮಾನತು

By Staff
|
Google Oneindia Kannada News

ದಾವಣಗೆರೆ : ಬಿಸಿಯೂಟದ ದವಸಧಾನ್ಯಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಶಿಕ್ಷಕರಿಬ್ಬರನ್ನು ಸೋಮವಾರ ಅಮಾನತು ಮಾಡಲಾಗಿದೆ.

ಕಾವೇರಮ್ಮ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರಾದ ಎಸ್‌.ಪಿ.ಹಿರೇಮಠ ಹಾಗೂ ಜಿ.ಕರಿಬಸಪ್ಪ ಅಮಾನತುಗೊಂಡವರು. ಇವರಿಬ್ಬರ ಪೈಕಿ ಎಸ್‌.ಪಿ.ಹಿರೇಮಠ ಎಂಬುವವರು ಶಿಕ್ಷಕರ ಸಂಘದ ಕಾರ್ಯದರ್ಶಿ ಎನ್ನುವುದು ಗಮನಾರ್ಹ.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಮೂಲಗಳ ಪ್ರಕಾರ, ಇಬ್ಬರೂ ಶಿಕ್ಷಕರು 10ಮೂಟೆ ಅಕ್ಕಿ ಹಾಗೂ ತೊಗರಿ ಬೇಳೆ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X