ಕ್ರೆೃಮ್ ನ್ಯೂಸ್ : ಆಸ್ತಿಗಾಗಿ ಮಗ ಅಪ್ಪನ ಕತ್ತು ಕತ್ತರಿಸಿದ!
ಬೆಂಗಳೂರು : ಅಧಿಕಾರ ಅಥವಾ ಆಸ್ತಿಗಾಗಿ ತಂದೆ ಮಕ್ಕಳನ್ನು, ಮಕ್ಕಳು ತಂದೆಯನ್ನು ಕೊಂದ ಸಂಗತಿಗಳು ಇತಿಹಾಸದಲ್ಲಿವೆ. ಆಸ್ತಿ ಸಂಬಂಧ ಹೆತ್ತ ಮಗನೇ, ಇತ್ತೀಚೆಗೆ ಅಪ್ಪನನ್ನು ಕೊಂದಿರುವ ಹೊಸ ಘಟನೆ ಯಲಹಂಕದಲ್ಲಿ ವರದಿಯಾಗಿದೆ.
ತನ್ನ ಮಗ ಹರೀಶ್ ಕುಮಾರ್(28)ನಿಂದ ಹತ್ಯೆಗೀಡಾದ ತಂದೆಯ ಹೆಸರು ಅಂಜಿನಪ್ಪ(65). ಚಿಂತಾಮಣಿಯ ನೆಲವಾಗಿಲು ಗ್ರಾಮದಲ್ಲಿನ ಅಂಜಿನಪ್ಪ ಅವರ ಮನೆಯನ್ನು ಹರೀಶ್ ಕುಮಾರ್ ಈವರೆಗೆ ಹೊಂದಿದ್ದರು. ಆ ಮನೆಯನ್ನು ತಮ್ಮ ಎರಡನೇ ಪತ್ನಿಯ ಮಗನಿಗೆ ನೀಡಲು ಅಂಜಿನಪ್ಪ ನಿರ್ಧರಿಸಿದರು. ಇದು ಹರೀಶ್ಗೆ ಇಷ್ಟವಾಗಲಿಲ್ಲ. ಈ ಸಂಗತಿ ತಂದೆ ಮಗನ ನಡುವೆ ವೈರತ್ವಕ್ಕೆ ಕಾರಣವಾಯಿತು ಎನ್ನಲಾಗಿದೆ.
ಮನೆಯನ್ನು ದಕ್ಕಿಸಿಕೊಳ್ಳಲು ಅಪ್ಪನನ್ನು ಮುಗಿಸಲು ನಿರ್ಧರಿಸಿದ ಹರೀಶ್ ಕುಮಾರ್, ಯೋಜನೆ ರೂಪಿಸಿದ. ತನ್ನ ತಂದೆ ಅಂಜಿನಪ್ಪ ಅವರಿಗೆ ಕುಡಿಸಿ, ತಂಗಿಯ ಮನೆಗೆ ಕರೆದುಕೊಂಡು ಹೋದ. ಮಾರ್ಗ ಮಧ್ಯೆ ಚಾಕುವಿನಿಂದ ಇರಿದು ಕೊಲೆ ಮಾಡಿದ. ನಂತರ ತಾನೇ ಪೊಲೀಸ್ ಠಾಣೆಗೆ ತೆರಳಿ, ಹರೀಶ್ ಕುಮಾರ್ ಸುಳ್ಳು ದೂರನ್ನು ದಾಖಲಿಸಿದ. ನಮ್ಮ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿ, ನನ್ನಪ್ಪನನ್ನು ಕೊಂದು ಪರಾರಿಯಾದರು ಎಂದು ದೂರಿನಲ್ಲಿ ತಿಳಿಸಿದ್ದ. ಪೊಲೀಸರ ತನಿಖೆ, ನೈಜ ಸಂಗತಿಯನ್ನು ಬಯಲಿಗೆಳೆದಿದೆ.
(ದಟ್ಸ್ ಕನ್ನಡ ವಾರ್ತೆ)