ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚಾಮುಂಡೇಶ್ವರಿ: ಬೆದರಿಕೆ ಹಿನ್ನೆಲೆ ಗುರುಸ್ವಾಮಿಗೆ ಭದ್ರತೆ
ಮೈಸೂರು : ಬೆದರಿಕೆ ಕರೆಯ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಯು ಅಭ್ಯರ್ಥಿ ಎ.ಎಸ್.ಗುರುಸ್ವಾಮಿ ಅವರಿಗೆ, ಚುನಾವಣೆ ಅಂತ್ಯಗೊಳ್ಳುವ ತನಕ ಪೊಲೀಸ್ ಭದ್ರತೆ ನೀಡಲಾಗಿದೆ.
ಗುರುಸ್ವಾಮಿ ನೀಡಿದ ದೂರಿನನ್ವಯ ಭದ್ರತೆ ನೀಡಲಾಗಿದೆ. ಕಳೆದ ಎರಡು ದಿನಗಳಿಂದ ದೂರವಾಣಿಯಲ್ಲಿ ಕೆಲವು ವ್ಯಕ್ತಿಗಳು ಬೆದರಿಸುತ್ತಿದ್ದಾರೆ. ಜೆಡಿಎಸ್ ಟಿಕೇಟ್ ಸಿಗದ ಕಾರಣ ಜೆಡಿಯುನಿಂದ ಸ್ಪರ್ಧಿಸಿದ್ದು, ಕಣದಿಂದ ಹಿಂದಕ್ಕೆ ಸರಿದು, ನಿವೃತ್ತಿ ಪಡೆಯುವಂತೆ ಕೆಲವರು ಒತ್ತಾಯಿಸುತ್ತಿದ್ದಾರೆ. ಚುನಾವಣೆ ಕಣದಲ್ಲಿ ಉಳಿದರೆ ಕೊಲ್ಲುವುದಾಗಿ ಬೆದರಿಸಲಾಗುತ್ತಿದೆ ಎಂದು ಗುರುಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಅಪರಿಚಿತ ವ್ಯಕ್ತಿಯಾಬ್ಬ ನಿನ್ನೆ ಮನೆಗೆ ಬಂದು ಬೆದರಿಸಿದ್ದಾನೆ. ಆದರೆ ನಾನು ಯಾವುದೇ ಒತ್ತಡ ಮತ್ತು ಬೆದರಿಕೆಗೆ ಮಣಿಯುವುದಿಲ್ಲ ಎಂದಿದ್ದಾರೆ. 1999ರ ಚುನಾವಣೆಯಲ್ಲಿ ಗುರುಸ್ವಾಮಿ ಅವರು, ಸಿದ್ದರಾಮಯ್ಯ ವಿರುದ್ಧ ಸೋತಿದ್ದರು.
(ಯುಎನ್ಐ)
Comments
Story first published: Thursday, November 23, 2006, 23:53 [IST]