ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದೇವೇಗೌಡರ ಫಲಿಸದ ತಂತ್ರ : ಸಿದ್ದು ಗುಂಪಿನಲ್ಲಿ ಹರ್ಷ
ಮೈಸೂರು : ನಾಮಪತ್ರ ವಾಪಸ್ಸು ಪಡೆಯುವ ಪ್ರಕ್ರಿಯೆ ಮುಗಿದಿದ್ದು, ಇದೀಗ ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯ ಸ್ಪಷ್ಟ ಚಿತ್ರಣ ಸಿಕ್ಕಿದೆ. ಅಂತಿಮವಾಗಿ 14ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ದೇವೇಗೌಡರ ತಂತ್ರಗಳು ವಿಫಲವಾಗಿದ್ದು, ಜೆಡಿಎಸ್ನಿಂದ ಬಂಡಾಯವೆದ್ದು ಜೆಡಿಯುನಿಂದ ಸ್ಪರ್ಧಿಸಿರುವ ಎ.ಎಸ್.ಗುರುಸ್ವಾಮಿ ಕಣದಲ್ಲಿಯೇ ಉಳಿದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನನ್ನ ಗುರಿ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಶಿವಬಸಪ್ಪ ಮಾತ್ರ ಎಂದಿದ್ದಾರೆ.
ಜೆಡಿಎಸ್ನಲ್ಲಿನ ಅಸಮಾಧಾನ, ಮಾಜಿ ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಅವರಿಗೆ ಅನುಕೂಲವಾಗುವುದೇ ಎಂಬ ಪ್ರಶ್ನೆಗೆ, ಸದ್ಯಕ್ಕೆ ಉತ್ತರ ಹೇಳುವುದು ಕಷ್ಟ. ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ನೇರ ಹಣಾ-ಹಣಿಗೆ ವೇದಿಕೆಯಂತೂ ಸಿದ್ಧ. ಡಿ.4ರಂದು ಚುನಾವಣೆ ನಡೆಯಲಿದೆ.
ಕಣದಲ್ಲಿರುವವರ
ವಿವರ
:
- ಸಿದ್ದರಾಮಯ್ಯ (ಕಾಂಗ್ರೆಸ್)
- ಶಿವಬಸಪ್ಪ (ಜೆಡಿಎಸ್)
- ಎ.ಎಸ್. ಗುರುಸ್ವಾಮಿ (ಜೆಡಿಯು)
- ಬಿ. ಕರುಣಾಕರ್ (ಸಮಾಜವಾದಿ ಪಕ್ಷ)
- ಮೈ.ಕಾ. ಪ್ರೇಮ್ಕುಮಾರ್(ರಾಷ್ಟ್ರೀಯ ಹಿಂದೂ ಸೇನಾ)
- ನಾಗರಾಜು(ಪಕ್ಷೇತರ)
- ಕರೀಗೌಡ(ಪಕ್ಷೇತರ)
- ಪಿ.ಎನ್. ಶ್ರೀನಾಥ್(ಪಕ್ಷೇತರ)
- ಬೋಗಾದಿ ನಾಗರಾಜು(ಪಕ್ಷೇತರ)
- ಎಂ.ಎಸ್. ರುದ್ರಸ್ವಾಮಿ(ಪಕ್ಷೇತರ)
- ಸರ್ವೋತ್ತಮ(ಪಕ್ಷೇತರ)
- ರಾಜು(ಪಕ್ಷೇತರ)
- ನರೇಂದ್ರ ರಾಜು(ಪಕ್ಷೇತರ)
- ಎಂ.ವೆಂಕಟೇಶ್(ಪಕ್ಷೇತರ)
Comments
Story first published: Tuesday, November 21, 2006, 23:53 [IST]