ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಈ ಭಾನುವಾರ ಕುಂಚ-ಕತೆ-ಕವಿತೆ, ಜತೆಗೆ ಕೊಂಚ ಕಾಫಿ!
ಬೆಂಗಳೂರು : ಈ ಭಾನುವಾರ(ನ.19) ನೀವುಗಳು ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರಾ ಫಿಲ್ಮ್ ಸೊಸೈಟಿ ಅಂಗಳಕ್ಕೆ ಬಂದರೆ, ‘ಗೆರೆಯ ಮರೆಯಲ್ಲಿ’ ಅನ್ನೋ ಕಾರ್ಯಕ್ರಮವನ್ನು ಸವಿಯಬಹುದು. ಜತೆಗೆ ಕೊಂಚ ಕಾಫಿಯೂ ಉಂಟು!
ಅಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಶುರುವಾಗಲಿದೆ. ಅಂದ ಹಾಗೆ ಏನಿದು ‘ಗೆರೆಯ ಮರೆಯಲ್ಲಿ ’ ಎಂದು ತಲೆಕೆಡಿಸಿಕೊಳ್ಳಬೇಡಿ. ಕುಂಚ-ಕತೆ-ಕವಿತೆ ಎಲ್ಲವೂ ಇದೆ. ಆಹ್ವಾನ ಪತ್ರಿಕೆಯಂತೆಯೇ ಕಾರ್ಯಕ್ರಮ ಸೊಗಸಾಗಿರುತ್ತದೆ ಅನ್ನುವುದು ಕಾರ್ಯಕ್ರಮ ಆಯೋಜಕರ ಹೇಳಿಕೆ.
ಲೇಸ್ ಫಿಲಂಸ್ ಮತ್ತು ಸುಚಿತ್ರಾ ಫಿಲ್ಮ್ ಜಂಟಿಯಾಗಿ ಈ ಕಾರ್ಯಕ್ರಮ ಆಯೋಜಿಸಿದ್ದು, ವೇದಿಕೆ ಮೇಲೆ ಪ.ಸ.ಕುಮಾರ್, ರಘುನಾಥ .ಚ.ಹ., ಮಲ್ಲಿಕಾರ್ಜುನ ತೂಲಹಳ್ಳಿ ಮತ್ತು ಡಿ.ವಿ.ಪ್ರಹ್ಲಾದ್ ನಿಮ್ಮ ನಿರೀಕ್ಷೆಗಳನ್ನು ನಿಜವಾಗಿಸುತ್ತಾರೆ. ಇನ್ನೂ ಹೆಚ್ಚಿಗೆ ಹೇಳುವುದು, ಕೇಳುವುದರಲ್ಲಿ ಅರ್ಥವಿಲ್ಲ... ಕಾರ್ಯಕ್ರಮಕ್ಕೆ ಬನ್ನಿ...
(ದಟ್ಸ್ ಕನ್ನಡ ವಾರ್ತೆ)
Comments
Story first published: Saturday, November 18, 2006, 23:53 [IST]