ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ : ನಕ್ಸಲರು-ಪೊಲೀಸರ ಮಧ್ಯೆಗುಂಡಿನ ಚಕಮಕಿ

By Staff
|
Google Oneindia Kannada News

ಸಿದ್ದಾಪುರ(ಉಡುಪಿ ಜಿಲ್ಲೆ) : ಒಬ್ಬ ಮಹಿಳೆ ಸೇರಿದಂತೆ ನಾಲ್ವರು ನಕ್ಸಲೀಯರ ಗುಂಪು ಮತ್ತು ನಕ್ಸಲ್‌ ನಿಗ್ರಹ ತಂಡದ ನಡುವೆ, ಗುರುವಾರ ಗುಂಡಿನ ಚಕಮಕಿ ನಡೆಯಿತು. ಕೂದಲೆಳೆ ಅಂತರದಲ್ಲಿ ನಕ್ಸಲರ ಗುಂಪು ಪರಾರಿಯಾಯಿತು.

ಉಡುಪಿ ಜಿಲ್ಲೆಯ ಶಂಕರನಾರಾಯಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ನಕ್ಸಲರು ದಾಸಿಕಾನು ಅರಣ್ಯದಲ್ಲಿ ತಲೆತಪ್ಪಿಸಿಕೊಂಡಿದ್ದಾರೆ. ಘಟನೆ ಬಗ್ಗೆ ಐಜಿಪಿ ಸತ್ಯನಾರಾಯಣ ರಾವ್‌ ಮಾಹಿತಿ ನೀಡಿದ್ದು, ಈ ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ ಎಂದಿದ್ದಾರೆ.

ನಕ್ಸಲರು ಸಾಮಾನ್ಯವಾಗಿ 15-20ಜನ ಸಂಚರಿಸುತ್ತಾರೆ. ಆಕಸ್ಮಿಕವಾಗಿ ಗುರುವಾರ ಈ ನಾಲ್ವರು ನಕ್ಸಲರು ಪೊಲೀಸರ(ನಕ್ಸಲ್‌ ನಿಗ್ರಹ ತಂಡ) ಕಣ್ಣಿಗೆ ಬಿದ್ದಿದ್ದಾರೆ. ಕೂಡಲೇ ಗುಂಡು ಸಿಡಿಸಿ, ಪರಾರಿಯಾಗಿದ್ದಾರೆ. ಶ್ವಾನದಳದೊಂದಿಗೆ ಕಾರ್ಯಾಚರಣೆ ಮುಂದುವರೆದಿದೆ. ಇಂದು ಗುಂಡಿನ ಚಕಮಕಿ ನಡೆದ ಸ್ಥಳದಲ್ಲಿ ಟಾರ್ಚ್‌ ಮತ್ತು ಕರವಸ್ತ್ರವೊಂದು ಸಿಕ್ಕಿದೆ ಎಂದು ಸತ್ಯನಾರಾಯಣ ರಾವ್‌ ಹೇಳಿದ್ದಾರೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X