ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೆಡ್ಲೈಟ್ ಏರಿಯಾದಿಂದ ತಪ್ಪಿಸಿಕೊಂಡ ನಾಗರತ್ನ ಕತೆ!
ಬೆಂಗಳೂರು : ಏಳು ವರ್ಷದ ಬಾಲಕಿಯನ್ನು ಆಕೆ ತಂದೆಯೇ ಮುಂಬೈನ ವೇಶ್ಯಾವಾಟಿಕೆ ಅಡ್ಡೆಗೆ ಮಾರಾಟ ಮಾಡಿದ ಘಟನೆ ವರದಿಯಾಗಿದೆ. ಬಾಲಕಿ ಅಲ್ಲಿಂದ ತಪ್ಪಿಸಿಕೊಂಡು ಬಂದಿರುವುದರಿಂದ ವಿಚಾರ ಬಯಲಾಗಿದೆ.
ಆಂಧ್ರ ಮೂಲದ ನಾರಾಯಣನ್ ಪ್ರಸ್ತುತ ಕೋಲಾರ ನಿವಾಸಿ. ಆತ ತನ್ನ ಮಗಳನ್ನು ಕೇವಲ ಹದಿನೈದು ಸಾವಿರ ರೂ.ಗಳಿಗೆ ಮಾರಾಟ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಗೀತಾ ಎಂಬಾಕೆಯನ್ನು ಮದುವೆಯಾಗಿ ಎರಡು ಮಕ್ಕಳನ್ನು ಪಡೆದಿದ್ದ ನಾರಾಯಣನ್, ಇತ್ತೀಚೆಗೆ ಆಂಧ್ರ ಪ್ರದೇಶದಲ್ಲಿ ಮತ್ತೊಂದು ಮದುವೆಯಾಗಿದ್ದನು.
ತನ್ನ ಮೊದಲ ಪತ್ನಿಯ ಮಗಳಾದ ನಾಗರತ್ನಾಳನ್ನು ನಾರಾಯಣನ್ ಮಾರಾಟ ಮಾಡಿದ್ದ. ಮುಂಬೈನ ವೇಶ್ಯಾವಾಟಿಕೆ ಅಡ್ಡೆಯಿಂದ ನಾಗರತ್ನ ತಪ್ಪಿಸಿಕೊಂಡು, ರೈಲಿನಲ್ಲಿ ತವರಿಗೆ ಮರಳಿದ್ದಳು. ಗೀತಾ ಸಂಬಂಧಿಕರು ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದು, ನಾರಾಯಣನ್ನನ್ನು ಬಂಧಿಸಿದ್ದಾರೆ. ತನಿಖೆ ಮುಂದುವರೆದಿದೆ.
(ಯುಎನ್ಐ)
Comments
Story first published: Thursday, November 16, 2006, 23:53 [IST]