ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು : ಕೋಮುಗಲಭೆ ತಪ್ಪಿಸಲು ಹೊಸ ವೇದಿಕೆ

By Staff
|
Google Oneindia Kannada News

ಮಂಗಳೂರು : ಸಹೋದರ ವೇದಿಕೆ ಎಂಬ ರಾಜಕೀಯೇತರ ಹಾಗೂ ಸಮಾನ ಮನಸ್ಕರ ಸಂಘಟನೆ ಬುಧವಾರ ಅಧಿಕೃತವಾಗಿ ಅಸ್ತಿತ್ವಕ್ಕೆ ಬರಲಿದೆ.

ಈ ಪ್ರದೇಶದ ಎಲ್ಲ ಸಮುದಾಯಗಳ ಸದಸ್ಯರನ್ನೂ ಒಳಗೊಂಡಿರುವ ಸಂಸ್ಥೆ, ಭವಿಷ್ಯದಲ್ಲಿ ಜಿಲ್ಲಾದ್ಯಂತ ಸಂಭವಿಸಬಹುದಾದ ಮತೀಯ ಗಲಭೆಗಳನ್ನು ತಡೆಯುವ ಸದಾಶಯ ಹೊತ್ತಿದೆ.

ಸಂಘದ ಪ್ರಧಾನ ಕಾರ್ಯದರ್ಶಿ ಡೆನಿಸ್‌ ಡಿಸಿಲ್ವಾ ಪ್ರಕಾರ, ಗಲಭೆಗಳನ್ನು ತಡೆಯಲು ವೇದಿಕೆ ಐದಂಶದ ಕಾರ್ಯತಂತ್ರ ರೂಪಿಸಿದೆ. ಮತೀಯ ಸೂಕ್ಷ್ಮ ಸ್ಥಳಗಳನ್ನು ಪತ್ತೆಹಚ್ಚುವುದು, ಜನಜಾಗೃತಿ ಉಂಟುಮಾಡುವುದು, ಗಲಭೆ ಸಂದರ್ಭಗಳಲ್ಲಿ ನಡೆದುಕೊಳ್ಳಬೇಕಾದ ರೀತಿ ಹೇಳಿಕೊಡುವುದು ಕಾರ್ಯತಂತ್ರದಲ್ಲಿ ಸೇರಿವೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X