ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚಿತ್ರದುರ್ಗ ಬಳಿ ಅಪಘಾತ : ಮೂವರು ಸಜೀವ ದಹನ
ಚಿತ್ರದುರ್ಗ : ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಲಾರಿಗಳೆರಡು ಮುಖಾಮುಖಿ ಡಿಕ್ಕಿಹೊಡೆದ ಪರಿಣಾಮ ಮೂವರು ಸಜೀವ ದಹನವಾಗಿದ್ದಾರೆ.
ನಗರದ ಹೊರವಲಯದಲ್ಲಿ, ಬುಧವಾರ ಬೆಳಗ್ಗೆ 5.15ಗಂಟೆ ಸುಮಾರು ಈ ದುರ್ಘಟನೆ ಸಂಭವಿಸಿದೆ. ಟಿವಿಎಸ್ ಕಂಪನಿ ಟಯರುಗಳನ್ನು ಹೊತ್ತೊಯ್ಯುತ್ತಿದ್ದ ಲಾರಿ, ಇನ್ನೊಂದು ಲಾರಿಗೆ ಡಿಕ್ಕಿ ಹೊಡೆದಾಗ ಬೆಂಕಿ ಹತ್ತಿಕೊಂಡು ಸ್ಫೋಟ ಸಂಭವಿಸಿದೆ.
ಎರಡೂ ಲಾರಿಗಳ ಡ್ರೆೃವರುಗಳು ಸೇರಿದಂತೆ ಒಟ್ಟು ಮೂವರು ಸ್ಥಳದಲ್ಲೇ ದಹನಗೊಂಡಿದ್ದಾರೆ. ಇನ್ನೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಾಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಒಂದು ಲಾರಿ ವಿಆರ್ಎಲ್ ಸಂಸ್ಥೆಯದ್ದೆಂದು ತಿಳಿದುಬಂದಿದ್ದು, ಟಯರು ಹೊತ್ತೊಯ್ಯುತ್ತಿದ್ದ ಇನ್ನೊಂದು ಲಾರಿಯ ಮಾಹಿತಿ ಪತ್ತೆಯಾಗಿಲ್ಲ. ಘಟನೆ ಹಿನ್ನೆಲೆಯಲ್ಲಿ, ಮೂರು ಗಂಟೆಗೂ ಹೆಚ್ಚುಕಾಲ ಸಂಚಾರ ಸ್ಥಗಿತಗೊಂಡಿತ್ತು.
(ಯುಎನ್ಐ)
Comments
Story first published: Wednesday, November 15, 2006, 23:53 [IST]