ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೇಯಸ್‌ ಪಾಟೀಲ್‌ಗೆ ಮರಣೋತ್ತರ ಶೌರ್ಯ ಪ್ರಶಸ್ತಿ

By Staff
|
Google Oneindia Kannada News

ಹುಬ್ಬಳ್ಳಿ : ಎರಡು ವರ್ಷಗಳ ಹಿಂದೆ ಸಂಭವಿಸಿದ ಸುನಾಮಿ ದುರಂತದಲ್ಲಿ, ತಾಯಿಯಾಡನೆ ಅಸುನೀಗಿದ ನಗರದ ಶಾಲಾಬಾಲಕ ಶ್ರೇಯಸ್‌ ಪಾಟೀಲ್‌ಗೆ ರಾಜ್ಯ ಸರ್ಕಾರ ಮರಣೋತ್ತರ ಶೌರ್ಯ ಪ್ರಶಸ್ತಿ ಪ್ರಕಟಿಸಿದೆ.

ವಾಸುದೇವ್‌ ಪಾಟೀಲ್‌ರ ಪುತ್ರ ಶ್ರೇಯಸ್‌, 2004ರ ಡಿಸೆಂಬರ್‌ 26ರಂದು ಕಡಲೂರಿನಲ್ಲಿ ನಡೆದ ಸುನಾಮಿ ದುರಂತದಲ್ಲಿ ತಾಯಿ ಸಂಧ್ಯಾ ಪಾಟೀಲರನ್ನು ಉಳಿಸಲು ಹೋಗಿ ಸಾವಿಗೀಡಾಗಿದ್ದ.

ವಾಸುದೇವ್‌ ಪಾಟೀಲ್‌ ಕುಟುಂಬ ಮತ್ತು ಅವರ ಗೆಳೆಯ ಶಶಿಧರ ಉಡುಪ ಕುಟುಂಬ ಪ್ರವಾಸಕ್ಕೆಂದು ಕಡಲೂರಿಗೆ ತೆರಳಿತ್ತು. ಶಶಿಧರ ಉಡುಪ ಹಾಗೂ ಅವರ ಪತ್ನಿ ಗೀತಾ, ಶ್ರೇಯಸ್‌ ಪಾಟೀಲ್‌ ಹಾಗೂ ಸಂಧ್ಯಾ ಪಾಟೀಲ್‌ ಅಲೆಗಳಲ್ಲಿ ಕೊಚ್ಚಿಹೋಗಿದ್ದರು. ಉಡುಪ ದಂಪತಿಗಳ ಪುತ್ರ ಪ್ರಣಾಮ್‌ ಮತ್ತು ವಾಸುದೇವ್‌ ಪಾಟೀಲ್‌ ಮಾತ್ರ ಬದುಕಿ ಉಳಿದಿದ್ದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ನವೆಂಬರ್‌ 14ರಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ವಾಸುದೇವ್‌ ಪಾಟೀಲರಿಗೆ ಈ ಪ್ರಶಸ್ತಿ ನೀಡಲಿದ್ದಾರೆ. ಇದಲ್ಲದೆ ರಾಜ್ಯ ಸರ್ಕಾರ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X