ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕರವೇ ಕಾರ್ಯಕರ್ತರಿಂದ ಆಂಗ್ಲ ಬೋರ್ಡುಗಳಿಗೆ ಮಸಿ
ಬೆಂಗಳೂರು : ಮಾಜಿ ಬೆಳಗಾವಿ ಮೇಯರ್ ಮೋರೆಗೆ ಮಸಿ ಬಳಿದು ವರ್ಷವಾದ ಪ್ರಯುಕ್ತ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ವಿವಿಧೆಡೆ ಆಂಗ್ಲ ಬೋರ್ಡುಗಳಿಗೆ ಕಪ್ಪುಬಣ್ಣ ಬಳಿದಿದ್ದಾರೆ.
ಪ್ರವೀಣ್ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಶನಿವಾರ(ನವೆಂಬರ್ 11)ಸುಮಾರು 50ಕಾರ್ಯಕರ್ತರು ರ್ಯಾಲಿ ನಡೆಸಿ, ಕನ್ನಡಕ್ಕೆ ಪ್ರಾಧಾನ್ಯ ನೀಡದ ಫಲಕಗಳಿಗೆ ಕಪ್ಪುಬಣ್ಣ ಬಳಿದರು.
ಈ ಸಂದರ್ಭದಲ್ಲಿ ಗಾಂಧೀನಗರ ಹಾಗೂ ರಾಜಾರಾಮ್ ಮೋಹನ್ರಾಯ್ ರಸ್ತೆಯಲ್ಲಿರುವ ಹೋಟೆಲುಗಳು, ಅಂಗಡಿಗಳು, ಬ್ಯಾಂಕುಗಳು ಹಾಗೂ ಚಿತ್ರಮಂದಿರಗಳ ಬೋರ್ಡುಗಳು ಕಪ್ಪುಬಣ್ಣ ಬಳಿಸಿಕೊಂಡಿವೆ. ರ್ಯಾಲಿಯಲ್ಲಿದ್ದ ಕಾರ್ಯಕರ್ತರು ಮಹಾರಾಷ್ಟ್ರದ ವಿರುದ್ಧ ಘೋಷಣೆ ಕೂಗಿದರು.
ಪೊಲೀಸರು ಕಾರ್ಯಕರ್ತರನ್ನು ಬಂಧಿಸಿ, ಸ್ವಲ್ಪ ಸಮಯದ ನಂತರ ಬಿಡುಗಡೆಗೊಳಿಸಿದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Sunday, November 12, 2006, 23:53 [IST]