ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಹೇಶ್ ಜೋಶಿ ವರ್ಗಾವಣೆ : ಜಾಲಪ್ಪ ಸಮರ್ಥನೆ
ಬೆಂಗಳೂರು : ಕೇಂದ್ರ ಸೂಚನಾ ಮತ್ತು ಪ್ರಸಾರ ಇಲಾಖೆಗೆ ನಾನು ಯಾರ ಕುರಿತೂ ದೂರು ನೀಡಿಲ್ಲ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ಸಂಸದ ಆರ್.ಎಲ್.ಜಾಲಪ್ಪ ಸ್ಪಷ್ಟಪಡಿಸಿದ್ದಾರೆ.
ಜ್ಞಾನಪೀಠ ಪುರಸ್ಕೃತ ಗಿರೀಶ್ ಕಾರ್ನಾಡ್, ಕೇಂದ್ರ ಸಚಿವರಿಗೆ ಬರೆದ ಪತ್ರ ಮಾಧ್ಯಮಗಳಿಗೆ ದೊರೆತ ನಂತರ ಪ್ರತಿಕ್ರಿಯಿಸಿದ ಅವರು, ಕಾರ್ನಾಡ್ ಸೇರಿದಂತೆ ಯಾರ ವಿರುದ್ಧವೂ ನಾನು ದೂರು ನೀಡಿಲ್ಲ. ಆದರೆ ಅಂಚೆ ಮೂಲಕ ನನಗೆ ಬಂದ ಪತ್ರವನ್ನಷ್ಟೇ ಇಲಾಖೆಗೆ ರವಾನಿಸಿದ್ದೇನೆ ಎಂದು ಹೇಳಿದರು.
ಪತ್ರದಲ್ಲಿ ಮಾಡಲಾಗಿರುವ ಆಪಾದನೆಗಳ ಹಿನ್ನೆಲೆಯಲ್ಲಿ, ವಿಚಾರಣೆ ನಡೆಸಬೇಕೆಂದು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇನೆ. ಅಲ್ಲದೆ ಬೆಂಗಳೂರು ದೂರದರ್ಶನ ನಿರ್ದೇಶಕರಾಗಿದ್ದ ಮಹೇಶ್ ಜೋಶಿ ಅವರನ್ನು ವರ್ಗಾಯಿಸಬೇಕೆಂದು ಕೇಳಿಕೊಂಡಿದ್ದೆ ಎಂದು ಸಮರ್ಥಿಸಿಕೊಂಡರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Sunday, November 12, 2006, 23:53 [IST]