ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ನವರಂಗ್‌’ ವೃತ್ತ ಮತ್ತು ಉದ್ಯಾನವನಕ್ಕೆ ಹೊಸ ಹೆಸರು

By Staff
|
Google Oneindia Kannada News

ಬೆಂಗಳೂರು : ರಾಜಾಜಿನಗರದ ನವರಂಗ ವೃತ್ತದ ಹೆಸರನ್ನು ಬದಲಿಸಲಾಗಿದೆ. ಈ ವೃತ್ತಕ್ಕೆ ಹೆಸರಾಂತ ಹರಿಕಥೆ ವಿದ್ವಾನ್‌ ಗುರುರಾಜುಲು ನಾಯ್ಡು ಅವರ ಹೆಸರನ್ನಿಡಲಾಗಿದೆ.

ಗುರುರಾಜುಲು ನಾಯ್ಡು ವೃತ್ತವನ್ನು ಶಾಸಕ ನೆ.ಲ.ನರೇಂದ್ರ ಬಾಬು ಉದ್ಘಾಟಿಸಿ, ಇದೇ ಸಂದರ್ಭದಲ್ಲಿ ನವರಂಗ ಚಿತ್ರಮಂದಿರದ ಸಮೀಪ ಇರುವ ಉದ್ಯಾನವವನಕ್ಕೆ ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹದೇವ ಉದ್ಯಾನ ಎಂದು ನಾಮಕರಣ ಮಾಡಿದರು.

ಸಮಾರಂಭದಲ್ಲಿ ಮಾತನಾಡಿದ ನೆ.ಲ.ನರೇಂದ್ರಬಾಬು, ಡಾ.ರಾಜ್‌ಕುಮಾರ್‌ ಕಲಾಕ್ಷೇತ್ರ ಪೂರ್ಣಗೊಂಡಿದೆ. ನ.14ರಂದು ಲೋಕಾರ್ಪಣಾ ಕಾರ್ಯ ನೆರವೇರಲಿದೆ. ಈ ಸಂದರ್ಭದಲ್ಲಿ ರಾಜಾಜಿನಗರದ ವೆಬ್‌ಸೈಟ್‌ ಕಾರ್ಯಾರಂಭಗೊಳ್ಳಲಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಗುರುರಾಜುಲು ನಾಯ್ಡು ಅವರ ಪುತ್ರಿ, ಹರಿಕಥೆ ವಿದುಷಿ ಜಿ.ಶೋಭಾ ನಾಯ್ದು ಹಾಜರಿದ್ದರು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X