ಉಸಿರುಕಟ್ಟುವ ಬನ್ನೇರುಘಟ್ಟ ರಸ್ತೆಯಲ್ಲಿ ನೋ ಪಾರ್ಕಿಂಗ್
ಬೆಂಗಳೂರು : ಬನ್ನೇರುಘಟ್ಟ ಮುಖ್ಯ ರಸ್ತೆಯ ಬೆಂಗಳೂರು ಡೇರಿ ವೃತ್ತದಿಂದ ಮೀನಾಕ್ಷಿ ದೇವಸ್ಥಾನ ಜಂಕ್ಷನ್ ವರೆಗಿನ ಎರಡೂ ಬದಿಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಬನ್ನೇರು ಘಟ್ಟ ರಸ್ತೆಯಲ್ಲಿ ವಾಹನ ದಟ್ಟಣೆ ಸಿಕ್ಕಾಪಟ್ಟೆ ಆಗಿದೆ. ಆದ್ದರಿಂದ ಸುಗಮ ಸಂಚಾರಕ್ಕೆ ಅನುಕೂಲಮಾಡಿಕೊಡಲು ನಿಲುಗಡೆ ನಿಷೇಧ ಆದೇಶ ಹೊರಡಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಭಾನುವಾರದಿಂದಲೇ ( ನ.5 ರಿಂದ) ಹೊಸ ಆದೇಶ ಜಾರಿಗೆ ಬಂದಿದೆ.
*
ನೈರುತ್ಯವಲಯ ವ್ಯಾಪ್ತಿಗೆ ಸೇರಿದ ಕೆಲವು ರೈಲುಗಳು ಹೊರಡುವ ವೇಳೆಯಲ್ಲಿ ಬದಲಾವಣೆಗಳಾಗಿವೆ. ಸಿಕಂದರಾಬಾದ್ ಮಾರ್ಗವಾಗಿ ತೆರಳಲಿರುವ ಯಶವಂತಪುರ-ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ ಭಾನುವಾರ ರಾತ್ರಿ 10.20 ಕ್ಕೆ ಹೊರಡುತ್ತದೆ.
ಹುಬ್ಬಳ್ಳಿ-ಮೀರಜ್ ಹಾಗೂ ಪುಣೆ ಮಾರ್ಗವಾಗಿ ತೆರಳುವ ಯಶವಂತಪುರ ನಿಜಾಮುದ್ದೀನ್ ಸಂಪರ್ಕಕ್ರಾಂತಿ ಎಕ್ಸ್ಪ್ರೆಸ್ ರೈಲು ಮಂಗಳವಾರ ಮತ್ತು ಬುಧವಾರ ಮಧ್ಯಾನ್ಹ 1.35ಕ್ಕೆ ಹೊರಡುತ್ತದೆ.
ಚೆನ್ನೈ-ಬೆಂಗಳೂರು ವಾರಾಂತ್ಯ ರೈಲು ಭಾನುವಾರ ರಾತ್ರಿ 11 ಗಂಟೆಗೆ ಹೊರಡಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.
*
ಡಿಎಡ್, ಟಿಸಿಎಚ್, ಡಿಪಿಇಡಿ ಮತ್ತು ಪಿಪಿಟಿ ತರಗತಿಗಳ ಪರೀಕ್ಷೆಯನ್ನು ಮುಂದೂಡಲಾಗಿದೆ. ಈ ತರಗತಿಗಳ ಪರೀಕ್ಷೆಯನ್ನು ನ. 30ರಿಂದ ಡಿ. 5 ರವರೆಗೆ ನಡೆಸಲಾಗುವುದು ಎಂದು ಪ್ರಕರಣೆಯಲ್ಲಿ ತಿಳಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)