ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಕ್ಕಳ ಕಲ್ಯಾಣ : ಡಾ.ರಜನಿ, ಎಚ್.ಎಂ.ಶಿವಣ್ಣಗೆ ಪ್ರಶಸ್ತಿ
ಬೆಂಗಳೂರು : ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಶಿವಮೊಗ್ಗದ ಡಾ.ರಜನಿ.ಎ.ಪೈ ಹಾಗೂ ಹಾಸನದ ಎಚ್.ಎಂ.ಶಿವಣ್ಣ ಅವರಿಗೆ ರಾಜ್ಯ ಸರ್ಕಾರ ಪ್ರಶಸ್ತಿ ಪ್ರಕಟಿಸಿದೆ.
ಯಶವಂತಪುರದ ಪರಸ್ಪರ ಟ್ರಸ್ಟ್ , ಗದಗಿನ ಉದ್ಯೋಗ ತರಬೇತಿ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಗಳಿಗೂ ಪ್ರಶಸ್ತಿ ಪ್ರಕಟಿಸಲಾಗಿದೆ.
ಡಾ.ರಜನಿ, ಶಿವಣ್ಣ, ಪರಸ್ಪರ ಟ್ರಸ್ಟ್ , ಗದಗಿನ ಉದ್ಯೋಗ ತರಬೇತಿ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಅನಾಥರು, ಅಂಗವಿಕಲರು ಹಾಗೂ ಶೋಷಿತ ಮಕ್ಕಳ ಕಲ್ಯಾಣಕ್ಕೆ ಸಲ್ಲಿಸಿದ ಸೇವೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ವೈಯಕ್ತಿಕ ಪ್ರಶಸ್ತಿ ತಲಾ 50ಸಾವಿರ ರೂಪಾಯಿ ನಗದು, ಸಂಸ್ಥೆಗೆ ನೀಡುವ ಪ್ರಶಸ್ತಿ ತಲಾ 1ಲಕ್ಷ ರೂಪಾಯಿ ನಗದು ಹಾಗೂ ಫಲಕ ಒಳಗೊಂಡಿವೆ. ನವೆಂಬರ್ 14ರಂದು ನಡೆಯುವ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
(ದಟ್ಸ್ ಕನ್ನಡ ವಾರ್ತೆ)
Comments
Story first published: Sunday, November 5, 2006, 23:53 [IST]