ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಎಸ್.ಕೆ.ಸೈದಾಪುರ ಸಾರಥ್ಯ
ಧಾರವಾಡ : ಡಾ.ಶ್ರೀನಿವಾಸ ಕಿಶನರಾವ್ ಸೈದಾಪುರ ಅವರು, ಕರ್ನಾಟಕ ವಿಶ್ವವಿದ್ಯಾಲಯದ 14ನೇ ಕುಲಪತಿಯಾಗಿ ನೇಮಕಗೊಂಡಿದ್ದಾರೆ.
ರಾಜ್ಯಪಾಲರು ಈ ಬಗ್ಗೆ ಅಧಿಕೃತ ನೇಮಕಾತಿ ಪತ್ರವನ್ನು ಕಳುಹಿಸಿದ್ದಾರೆ. ಮುಂದಿನ 4ವರ್ಷಗಳ ಕಾಲ, ಕುಲಪತಿಯಾಗಿ ಎಸ್.ಕೆ.ಸೈದಾಪುರ ಕಾರ್ಯ ನಿರ್ವಹಿಸುವರು.
ಗುಲ್ಬರ್ಗ ಮೂಲದ ಡಾ.ಶ್ರೀನಿವಾಸ ಕಿಶನರಾವ್ ಸೈದಾಪುರ, ಎಂ.ಎಸ್ಸಿ ಮತ್ತು ಪಿಎಚ್ಡಿ ಪದವಿಯನ್ನು ಪಡೆದವರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಣಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದವರು.
ಅವರು ಶಾಂತಿ ಸ್ವರೂಪ ಭಟ್ನಾಗರ್ ಪ್ರಶಸ್ತಿ ವಿಜೇತರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Wednesday, October 25, 2006, 23:53 [IST]