ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಬರೀಷಣ್ಣನಿಗೆ ಜೈಜೈ : ಮಂಡ್ಯದಲ್ಲಿ ಸಂಭ್ರಮದ ಹಬ್ಬ

By Staff
|
Google Oneindia Kannada News

ಮಂಡ್ಯ : ಅಂಬರೀಷ್‌ ಕೇಂದ್ರ ಸಂಪುಟ ಪ್ರವೇಶಿಸಿದ ಬೆನ್ನಲ್ಲಿ, ತವರು ಜಿಲ್ಲೆಯಲ್ಲಿ ಅಭಿಮಾನಿಗಳ ಸಂಭ್ರಮ ಸಡಗರಗಳು ಹೆಚ್ಚಿವೆ. ಪಟಾಕಿ ಸಿಡಿಸಿ, ಅಂಬರೀಷ್‌ ಪರ ಘೋಷಣೆ ಕೂಗುತ್ತಿರುವ ದೃಶ್ಯ ಬುಧವಾರ ಕಂಡು ಬರುತ್ತಿದೆ.

ಬಸ್‌ಗಳನ್ನು ತಡೆದು ನಿಲ್ಲಿಸಿ, ಅಂಬರೀಷ್‌ ಬೆಂಬಲಿಗರು ಮತ್ತು ಅಭಿಮಾನಿಗಳು, ಪ್ರಯಾಣಿಕರಿಗೆ ಸಿಹಿ ಹಂಚುತ್ತಿದ್ದಾರೆ. ಒಟ್ಟಾರೇ, ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ರಾಜ್ಯದ ಕಾಂಗ್ರೆಸ್‌ ನಾಯಕರು ಮತ್ತು ವಕ್ಕಲಿಗರ ಸಮುದಾಯ ಹರ್ಷ ವ್ಯಕ್ತಪಡಿಸಿದೆ. ನಟ ವಿಷ್ಣುವರ್ಧನ್‌, ಸುಂದರರಾಜ್‌ ಸೇರಿದಂತೆ ಚಿತ್ರರಂಗದ ಗಣ್ಯರು, ಅಂಬರೀಷ್‌ಗೆ ಶುಭಾಶಯ ತಿಳಿಸಿದ್ದಾರೆ.

ಸುಮಲತಾ ಪ್ರತಿಕ್ರಿಯೆ : ಅಂಬರೀಷ್‌ ಮೊದಲಿನಿಂದಲೂ ಜನರ ಮಧ್ಯೆಯೇ ಬೆಳೆದವರು. ಮನೆಯಲ್ಲಿ ನಮಗೆ ಅವರ ದರ್ಶನ ಸ್ವಲ್ಪ ಅಪರೂಪವೇ, ಈಗ ಇನ್ನಷ್ಟು ಅಪರೂಪವಾಗಬಹುದು. ಆದರೆ ಜನರಿಗಾಗಿ ಇದೆಲ್ಲವೂ ಅನಿವಾರ್ಯ ಎಂದು ನಟ ಅಂಬರೀಷ್‌ರ ಪತ್ನಿ ಮತ್ತು ನಟಿ ಸುಮಲತಾ ಅಭಿಪ್ರಾಯಪಟ್ಟಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X