ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೋರೆ ಗುಂಡು ತೆಗೆಯಲು ವೈದ್ಯರ ತಂಡದ ಆಗಮನ
ಬೆಳಗಾವಿ : ಶಾಸಕ ಪ್ರಭಾಕರ್ ಕೋರೆ ಯಕೃತ್ತಿನಲ್ಲಿ ಹೊಕ್ಕಿರುವ ಗುಂಡು ಹೊರತೆಗೆಯಲು ಮುಂಬಯಿ ಹಾಗೂ ಬೆಂಗಳೂರಿನ ವೈದ್ಯರ ತಂಡ ಶನಿವಾರ ನಗರ ತಲುಪಿದೆ.
ಕೋರೆ ಚೇತರಿಸಿಕೊಳ್ಳುತ್ತಿದ್ದು, ಅವರ ದೇಹದಿಂದ ಎರಡು ಗುಂಡುಗಳನ್ನು ಹೊರತೆಗೆಯಲಾಗಿದೆ. ಶಸ್ತ್ರ ಚಿಕಿತ್ಸೆ ನಂತರ ಅವರ ರಕ್ತದೊತ್ತಡ, ನಾಡಿಮಿಡಿತ, ಉಸಿರಾಟ ಸಾಮಾನ್ಯ ಸ್ಥಿತಿಗೆ ಬಂದಿದ್ದು, ಶೀಘ್ರದಲ್ಲೇ ಮೂರನೇ ಗುಂಡು ಹೊರತೆಗೆಯಲಾಗುವುದು ಎಂದು ಕೆ.ಎಲ್.ಇ ಆಸ್ಪತ್ರೆ ಮೂಲಗಳು ಹೇಳಿವೆ.
ಈ ಮಧ್ಯೆ ಪ್ರಭಾಕರ್ ಕೋರೆ ಮೇಲೆ ಗುಂಡಿನ ದಾಳಿ ನಡೆಸಿದ್ದ ಜಗದೀಶ್ ಕೋರೆ ಶುಕ್ರವಾರ ಪೊಲೀಸ್ ಬಂಧನಕ್ಕೊಳಗಾಗಿದ್ದಾರೆ.
ಪೊಲೀಸರು ಚಿಕ್ಕೋಡಿಯಲ್ಲಿ ಬಂಧಿಸಿದ್ದು, ಪರವಾನಿಗೆ ಇಲ್ಲದ ಪಿಸ್ತೂಲು ಹಾಗೂ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಜಗದೀಶ್ ಎರಡು ತಿಂಗಳ ಹಿಂದೆ ಪರವಾನಿಗೆ ಇಲ್ಲದೆ ಪಿಸ್ತೂಲು ಖರೀದಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
(ಏಜನ್ಸೀಸ್)
Story first published: Saturday, October 21, 2006, 23:53 [IST]