ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಟ್ರಾಫಿಕ್ ಸಮಸ್ಯೆ ನಿವಾರಿಸಿ : ಸರ್ಕಾರಕ್ಕೆ ಪ್ರೇಮ್ಜಿ ಒತ್ತಾಯ
ಬೆಂಗಳೂರು : ನಗರದ ವಾಹನ ದಟ್ಟಣೆ ಉತ್ಪಾದಕತೆ ಮೇಲೆ ಭಾರೀ ಪರಿಣಾಮ ಬೀರಿದ್ದು, ಸರ್ಕಾರ ಈ ಸಮಸ್ಯೆಯನ್ನು ತುರ್ತಾಗಿ ನಿವಾರಿಸಬೇಕು ಎಂದು ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್ಜಿ ಆಗ್ರಹಿಸಿದ್ದಾರೆ.
ಬುಧವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ವಾಹನ ದಟ್ಟಣೆ ನಗರದ ಸುತ್ತಮುತ್ತ ಇರುವ ಕಂಪನಿಗಳ ಉತ್ಪಾದಕತೆಯನ್ನೇ ಹಾಳು ಮಾಡುತ್ತಿದೆ. ಇದು ಕೇವಲ ಐಟಿ, ಬಿಟಿ ಕಂಪನಿಗಳ ಸಮಸ್ಯೆಯಲ್ಲ. ಹಾಗಾಗಿ ಈ ಸಮಸ್ಯೆಗೆ ಪರಿಹಾರ ರೂಪಿಸುವುದು ರಾಜ್ಯ ಸರ್ಕಾರದ ಪ್ರಥಮ ಹಾಗೂ ದ್ವಿತೀಯ ಆದ್ಯತೆಯಾಗಬೇಕು ಎಂದು ಹೇಳಿದರು.
ಸಾಫ್ಟ್ವೇರ್ ಕಂಪನಿಗಳಿಗೆ ಭೂಮಿ ನೀಡಿದ ದರದಲ್ಲೇ ಸಾಫ್ಟ್ವೇರ್ ಕೇಂದ್ರಗಳಲ್ಲಿ ಸ್ಥಾಪಿಸುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೂ ಭೂಮಿ ನೀಡಬೇಕು. ಆಗ ಸಾಫ್ಟ್ವೇರ್ ಉದ್ಯೋಗಿಗಳು ಆಯಾ ಪ್ರದೇಶದಲ್ಲೇ ವಾಸಿಸಲು ಪ್ರೋತ್ಸಾಹ ದೊರೆಯುತ್ತದೆ. ಇದು ಸಮಸ್ಯೆಗೆ ತಕ್ಕಮಟ್ಟಿನ ಪರಿಹಾರವಾದೀತು ಎಂದು ಸಲಹೆ ನೀಡಿದರು.
(ಏಜನ್ಸೀಸ್)
Comments
Story first published: Thursday, October 19, 2006, 23:53 [IST]