ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅ.18, 19ರಂದು ರಂಗಶಂಕರದಲ್ಲಿ ನೀನಾಸಂ ನಾಟಕಗಳು
ಬೆಂಗಳೂರು : ಅಕ್ಟೋಬರ್ 18 ಹಾಗೂ 19ರಂದು ನಗರದ ರಂಗಶಂಕರದಲ್ಲಿ ನೀನಾಸಂ ಕಲಾವಿದರು ಎರಡು ನಾಟಕಗಳನ್ನು ಪ್ರದರ್ಶಿಸಲಿದ್ದಾರೆ.
18ರಂದು ಬಿರುಗಾಳಿ ಎಂಬ ನಾಟಕ ನಾಟಕ ಪ್ರದರ್ಶನಗೊಳ್ಳಲಿದೆ. ಇದು ಶೇಕ್ಸ್ಪಿಯರನ ನಾಟಕವಾಗಿದ್ದು, ಕುವೆಂಪು ಕನ್ನಡಕ್ಕೆ ಅನುವಾದಿಸಿದ್ದಾರೆ. ಉಂಡಾಡಿಗುಂಡ ಎಂಬ ನಾಟಕ ಅಕ್ಟೋಬರ್ 19ರಂದು ಪ್ರದರ್ಶನಗೊಳ್ಳಲಿದೆ. ಆಲಿವ್ ಗೋಲ್ಡ್ಸ್ಮಿತ್ನ ಈ ನಾಟಕವನ್ನು ಪರ್ವತವಾಣಿ ಕನ್ನಡೀಕರಿಸಿದ್ದಾರೆ.
ಎರಡೂ ನಾಟಕಗಳು ಅನುಕ್ರಮವಾಗಿ ಸಂಜೆ 7.30 ಗಂಟೆಗೆ ಪ್ರದರ್ಶನಗೊಳ್ಳಲಿವೆ.
ಆಸಕ್ತರು ಸಂಪರ್ಕಿಸಿ : 2659 2777, 92434 43343
(ದಟ್ಸ್ ಕನ್ನಡ ವಾರ್ತೆ)
Comments
Story first published: Sunday, October 15, 2006, 23:53 [IST]