ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಲುವಾಸ ಸಾಕಾಯ್ತು... ಮುಕ್ತಿ ನೀಡಿ -ವಿನಿವಿಂಕ್‌ ಶಾಸ್ತ್ರಿ

By Staff
|
Google Oneindia Kannada News

ಬೆಂಗಳೂರು : ಠೇವಣಿದಾರರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಆರೋಪ ಹೊತ್ತಿರುವ, ವಿನಿವಿಂಕ್‌ ಸಂಸ್ಥೆಯ ಕೆ.ಎನ್‌.ಶ್ರೀನಿವಾಸ ಶಾಸ್ತ್ರಿ ಮತ್ತು ಜಿ.ಲೋಕೇಶ್‌ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

‘ಕಳೆದ 10ತಿಂಗಳಿಂದ ನಾವುಗಳು ಬಂಧನದಲ್ಲಿದ್ದೇವೆ. ನಮಗೆ ಜಾಮೀನು ನೀಡಬೇಕು’ ಎಂದು ಹೈಕೋರ್ಟ್‌ಗೆ ವಿನಿವಿಂಕ್‌ ಹಗರಣದ ಈ ಇಬ್ಬರು ಪ್ರಮುಖ ಆರೋಪಿಗಳು ಮನವಿ ಮಾಡಿದ್ದಾರೆ. ಈ ಸಂಬಂಧ ಹೈಕೋರ್ಟ್‌ನಲ್ಲಿ ವಿಚಾರಣೆ, ಸದ್ಯದಲ್ಲಿಯೇ ಆರಂಭಗೊಳ್ಳುವ ನಿರೀಕ್ಷೆ ಇದೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಶಾಖೆ ತೆರೆದು, ಸುಮಾರು 8ಸಾವಿರಕ್ಕೂ ಅಧಿಕ ಮಂದಿ ಠೇವಣಿದಾರರನ್ನು ವಿನಿವಿಂಕ್‌ ವಂಚಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.2005ರಲ್ಲಿ ಶ್ರೀನಿವಾಸ ಶಾಸ್ತ್ರಿಯನ್ನು ಬಂಧಿಸಲಾಗಿತ್ತು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X