ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜೈಲುವಾಸ ಸಾಕಾಯ್ತು... ಮುಕ್ತಿ ನೀಡಿ -ವಿನಿವಿಂಕ್ ಶಾಸ್ತ್ರಿ
ಬೆಂಗಳೂರು : ಠೇವಣಿದಾರರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಆರೋಪ ಹೊತ್ತಿರುವ, ವಿನಿವಿಂಕ್ ಸಂಸ್ಥೆಯ ಕೆ.ಎನ್.ಶ್ರೀನಿವಾಸ ಶಾಸ್ತ್ರಿ ಮತ್ತು ಜಿ.ಲೋಕೇಶ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.
‘ಕಳೆದ 10ತಿಂಗಳಿಂದ ನಾವುಗಳು ಬಂಧನದಲ್ಲಿದ್ದೇವೆ. ನಮಗೆ ಜಾಮೀನು ನೀಡಬೇಕು’ ಎಂದು ಹೈಕೋರ್ಟ್ಗೆ ವಿನಿವಿಂಕ್ ಹಗರಣದ ಈ ಇಬ್ಬರು ಪ್ರಮುಖ ಆರೋಪಿಗಳು ಮನವಿ ಮಾಡಿದ್ದಾರೆ. ಈ ಸಂಬಂಧ ಹೈಕೋರ್ಟ್ನಲ್ಲಿ ವಿಚಾರಣೆ, ಸದ್ಯದಲ್ಲಿಯೇ ಆರಂಭಗೊಳ್ಳುವ ನಿರೀಕ್ಷೆ ಇದೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಶಾಖೆ ತೆರೆದು, ಸುಮಾರು 8ಸಾವಿರಕ್ಕೂ ಅಧಿಕ ಮಂದಿ ಠೇವಣಿದಾರರನ್ನು ವಿನಿವಿಂಕ್ ವಂಚಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.2005ರಲ್ಲಿ ಶ್ರೀನಿವಾಸ ಶಾಸ್ತ್ರಿಯನ್ನು ಬಂಧಿಸಲಾಗಿತ್ತು.
(ದಟ್ಸ್ ಕನ್ನಡ ವಾರ್ತೆ)
Comments
Story first published: Thursday, October 12, 2006, 23:53 [IST]