ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದಕ್ಷಿಣ ಕನ್ನಡದಿ ಶಾಂತಿಯ ಅಲೆ, ಶಾಲಾ-ಕಾಲೇಜು ಶುರು
ಮಂಗಳೂರು : ಕೋಮುಗಲಭೆಯಿಂದ ತತ್ತರಿಸಿದ್ದ ದಕ್ಷಿಣ ಕನ್ನಡ ಶಾಂತಸ್ಥಿತಿಗೆ ಮರಳುತ್ತಿದೆ. ಬುಧವಾರ ಶಾಲಾಕಾಲೇಜುಗಳು ಆರಂಭಗೊಂಡಿವೆ.
ಇಂದು ಬೆಳಗ್ಗೆಯಿಂದ ಕಫ್ಯೂ ಸಡಿಲಿಸಲಾಗಿದ್ದು, ಮುಂಜಾಗ್ರತೆ ಕ್ರಮವಾಗಿ ರಾತ್ರಿ ವೇಳೆ ಮಂಗಳೂರು, ಉಳ್ಳಾಲ, ಕೊಣಾಜೆಗಳಲ್ಲಿ ಕಫ್ಯೂ ಮುಂದುವರಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಕಫ್ಯೂ ಪರಿಣಾಮ ದಿನವೊಂದಕ್ಕೆ ಸುಮಾರು 20ಕೋಟಿ ರೂ. ವ್ಯಾಪಾರ ನಷ್ಟ ಸಂಭವಿಸಿದೆ. ಪ್ರವಾಸೋದ್ಯಮ ಮತ್ತು ಮತ್ಸ್ಯೋದ್ಯಮಕ್ಕೆ ಸಾಕಷ್ಟು ನಷ್ಟವಾಗಿದೆ. ಸುಮಾರು 5ಲಕ್ಷಕ್ಕೂಅಧಿಕ ಮಂದಿ ದಿನಗೂಲಿಗಳ ಬದುಕು ಸಂಕಷ್ಟಕ್ಕೆ ಸಿಲುಕಿತ್ತು ಎಂದು ಅಂದಾಜಿಸಲಾಗಿದೆ. ಕಳೆದ ಒಂದು ವಾರದಿಂದ ನಡೆದ ಕೋಮು ಗಲಭೆಯಲ್ಲಿ ಇಬ್ಬರು ಮೃತಪಟ್ಟಿದ್ದು, 90ಮಂದಿ ಗಾಯಗೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Wednesday, October 11, 2006, 23:53 [IST]