ಭಾರತೀಯ ಲೇಖಕಿ ಕಿರಣ್ದೇಸಾಯಿಗೆ ಬೂಕರ್ ಪ್ರಶಸ್ತಿ
ಲಂಡನ್ : ಭಾರತೀಯ ಲೇಖಕಿ ಕಿರಣ್ ದೇಸಾಯಿ, ಪ್ರತಿಷ್ಠಿತ ಬೂಕರ್ ಪ್ರಶಸ್ತಿಯನ್ನು ಪಡೆದರು. ಇದು ಸಾಹಿತ್ಯಕ್ಕೆ ಸಲ್ಲುವ ವಿಶ್ವದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದು.
ತಮ್ಮ 35ನೇ ವಯಸ್ಸಿನಲ್ಲಿಯೇ ತಮ್ಮ ‘ದಿ ಇನ್ಹೆರಿಟೆನ್ಸ್ ಆಫ್ ಲಾಸ್’ ಕಾದಂಬರಿಗೆ ಈ ಪ್ರಶಸ್ತಿಯನ್ನು ಅವರು ಪಡೆದಿದ್ದಾರೆ. 50ಸಾವಿರ ಪೌಂಡ್ ಹಣ ಬಹುಮಾನ ರೂಪವಾಗಿ ಅವರನ್ನು ಸೇರಿದೆ. ಕಿರಣ್ ದೇಸಾಯಿ ತಾಯಿ ಮತ್ತು ಲೇಖಕಿ ಅನಿತಾ, ಕಳೆದ ಮೂರು ಸಲ ಬೂಕರ್ ಪ್ರಶಸ್ತಿ ಪಡೆಯುವಲ್ಲಿ ವಿಫಲರಾಗಿದ್ದರು.
ಈ ಹಿಂದೆ 1997ರಲ್ಲಿ ಅರುಂಧತಿ ರಾಯ್ ತಮ್ಮ 36ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಪಡೆದಿದ್ದರು. 1991ರಲ್ಲಿ ತಮ್ಮ 32ನೇ ವಯಸ್ಸಿನಲ್ಲಿ ಬೆನ್ ಒಕ್ರಿ ಬೂಕರ್ ಪಡೆದಿದ್ದರು.
ಕಾದಂಬರಿಯಲ್ಲಿ ಏನಿದೆ? : ಪ್ರಸಕ್ತ ವರ್ಷ ಪ್ರಶಸ್ತಿ ಗೆ ಪಾತ್ರವಾಗಿರುವ ಕಿರಣ್ ದೇಸಾಯಿ ಅವರ ಕಾದಂಬರಿಯಲ್ಲಿ, ನ್ಯಾಯಮೂರ್ತಿಯಾಬ್ಬ ತನ್ನ ವಿಶ್ರಾಂತ ದಿನಗಳನ್ನು, ಹಿಮಾಲಯದ ಶಾಂತ ವಾತಾವರಣದಲ್ಲಿ ಕಳೆಯಲು ಬಯಸುತ್ತಾನೆ. ಆದರೆ ಮೊಮ್ಮಗಳಿಂದ ಅವನ ಬದುಕಿನ ದಿಕ್ಕು ಬದಲಾಗುತ್ತದೆ. ಇಂತಹ ವಿಭಿನ್ನ ಕತೆ ಓದುಗರಿಗೆ ಇಷ್ಟವಾಗುತ್ತದೆ.
(ಏಜನ್ಸೀಸ್)