ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಲೇಖಕಿ ಕಿರಣ್‌ದೇಸಾಯಿಗೆ ಬೂಕರ್‌ ಪ್ರಶಸ್ತಿ

By Staff
|
Google Oneindia Kannada News

ಲಂಡನ್‌ : ಭಾರತೀಯ ಲೇಖಕಿ ಕಿರಣ್‌ ದೇಸಾಯಿ, ಪ್ರತಿಷ್ಠಿತ ಬೂಕರ್‌ ಪ್ರಶಸ್ತಿಯನ್ನು ಪಡೆದರು. ಇದು ಸಾಹಿತ್ಯಕ್ಕೆ ಸಲ್ಲುವ ವಿಶ್ವದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದು.

ತಮ್ಮ 35ನೇ ವಯಸ್ಸಿನಲ್ಲಿಯೇ ತಮ್ಮ ‘ದಿ ಇನ್‌ಹೆರಿಟೆನ್ಸ್‌ ಆಫ್‌ ಲಾಸ್‌’ ಕಾದಂಬರಿಗೆ ಈ ಪ್ರಶಸ್ತಿಯನ್ನು ಅವರು ಪಡೆದಿದ್ದಾರೆ. 50ಸಾವಿರ ಪೌಂಡ್‌ ಹಣ ಬಹುಮಾನ ರೂಪವಾಗಿ ಅವರನ್ನು ಸೇರಿದೆ. ಕಿರಣ್‌ ದೇಸಾಯಿ ತಾಯಿ ಮತ್ತು ಲೇಖಕಿ ಅನಿತಾ, ಕಳೆದ ಮೂರು ಸಲ ಬೂಕರ್‌ ಪ್ರಶಸ್ತಿ ಪಡೆಯುವಲ್ಲಿ ವಿಫಲರಾಗಿದ್ದರು.

ಈ ಹಿಂದೆ 1997ರಲ್ಲಿ ಅರುಂಧತಿ ರಾಯ್‌ ತಮ್ಮ 36ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಪಡೆದಿದ್ದರು. 1991ರಲ್ಲಿ ತಮ್ಮ 32ನೇ ವಯಸ್ಸಿನಲ್ಲಿ ಬೆನ್‌ ಒಕ್ರಿ ಬೂಕರ್‌ ಪಡೆದಿದ್ದರು.

ಕಾದಂಬರಿಯಲ್ಲಿ ಏನಿದೆ? : ಪ್ರಸಕ್ತ ವರ್ಷ ಪ್ರಶಸ್ತಿ ಗೆ ಪಾತ್ರವಾಗಿರುವ ಕಿರಣ್‌ ದೇಸಾಯಿ ಅವರ ಕಾದಂಬರಿಯಲ್ಲಿ, ನ್ಯಾಯಮೂರ್ತಿಯಾಬ್ಬ ತನ್ನ ವಿಶ್ರಾಂತ ದಿನಗಳನ್ನು, ಹಿಮಾಲಯದ ಶಾಂತ ವಾತಾವರಣದಲ್ಲಿ ಕಳೆಯಲು ಬಯಸುತ್ತಾನೆ. ಆದರೆ ಮೊಮ್ಮಗಳಿಂದ ಅವನ ಬದುಕಿನ ದಿಕ್ಕು ಬದಲಾಗುತ್ತದೆ. ಇಂತಹ ವಿಭಿನ್ನ ಕತೆ ಓದುಗರಿಗೆ ಇಷ್ಟವಾಗುತ್ತದೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X