ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರಲ್ಲಿ ಮರುಕಳಿಸಿದ ಹಿಂಸೆ : ಮತ್ತೊಬ್ಬನ ಬಲಿ

By Staff
|
Google Oneindia Kannada News

ವಿವಿಧೆಡೆ ಇರಿತ ; 15 ಮಂದಿಗೆ ಗಾಯ, ನಿಷೇಧಾಜ್ಞೆ ಮುಂದುವರಿಕೆ

ಮಂಗಳೂರು : ನಗರ ಇನ್ನೇನು ಶಾಂತವಾಗುತ್ತಿದೆ ಎನ್ನುವಷ್ಟರಲ್ಲೇ ಮತ್ತೆ ಹಿಂಸೆ ತಲೆದೋರಿದ ಪರಿಣಾಮ ಮತ್ತೋರ್ವ ಬಲಿಯಾಗಿದ್ದಾನೆ.

ಗಲಭೆಯಲ್ಲಿ ಇರಿತಕ್ಕೊಳಗಾದ ವ್ಯಕ್ತಿಯಾಬ್ಬ ಶನಿವಾರ ಮೃತನಾಗಿದ್ದ. ಈ ಹಿನ್ನೆಲೆಯಲ್ಲಿ ನಗರಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಆದರೆ ರಾತ್ರಿ 8.30 ಗಂಟೆ ಸುಮಾರು ಆ್ಯಂಬ್ಯುಲೆನ್ಸ್‌ನಲ್ಲಿ ಎಂಟು ಜನ ಆಯುಧ ಸಮೇತ ತೆರಳುತ್ತಿದ್ದಾಗ, ಮತ್ತೊಂದು ಗುಂಪು ಅವರ ಮೇಲೆ ದಾಳಿ ನಡೆಸಿತು.

ಆ್ಯಂಬ್ಯುಲನ್ಸ್‌ನಲ್ಲಿದ್ದ ಆರೂ ಜನರಿಗೆ ಇರಿತ ಉಂಟಾಗಿದ್ದು, ಒಬ್ಬಮೃತಪಟ್ಟಿದ್ದಾನೆ. ಆ್ಯಂಬ್ಯುಲನ್ಸ್‌ಗೆ ಬೆಂಕಿ ಹಚ್ಚಲಾಯಿತಾದರೂ ಚಾಲಕ ಅನಾಹುತದಿಂದ ಪಾರಾಗಿದ್ದಾನೆ. ಇದಲ್ಲದೆ ನಗರದ ಮೂರು ಕಡೆಗಳಲ್ಲಿ ಇರಿತದ
ಘಟನೆಗಳು ವರದಿಯಾಗಿದ್ದು, 15 ಜನ ಗಾಯಗೊಂಡಿದ್ದಾರೆ.

ಪೊಲೀಸ್‌ ವರಿಷ್ಠರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಪರಿಸ್ಥಿತಿ ನಿಯಂತ್ರಿಸಲು ವ್ಯಾಪಕ ಕ್ರಮ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಮುಂದುವರಿಸಲಾಗಿದೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X