ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಭ್ರಷ್ಟರ ವಿರುದ್ಧದ ನಮ್ಮ ಆಂದೋಲನಕ್ಕೆ ಕೈ ಸೇರಿಸಿ’

By Staff
|
Google Oneindia Kannada News

‘ಭ್ರಷ್ಟರ ವಿರುದ್ಧದ ನಮ್ಮ ಆಂದೋಲನಕ್ಕೆ ಕೈ ಸೇರಿಸಿ’
ನೂತನ ಲೋಕಾಯುಕ್ತ ಸಂತೋಷ್‌ ಹೆಗಡೆಯವರ ಲೋಕಕಲ್ಯಾಣ ಯಾತ್ರೆ ಆರಂಭ

ಬೆಂಗಳೂರು : ಭ್ರಷ್ಟರ ವಿರುದ್ಧ ಹೋರಾಟಕ್ಕೆ ವಿದ್ಯಾರ್ಥಿಗಳು, ಗೃಹಿಣಿಯರು, ಉದ್ಯೋಗಿಗಳು, ನಿವೃತ್ತ ನೌಕರರು ಸೇರಿದಂತೆ ಸಾರ್ವಜನಿಕರ ಸಹಕಾರವನ್ನು ‘ನ್ಯಾಯಮೂರ್ತಿ ವೆಂಕಟಾಚಲ ಭ್ರಷ್ಟಾಚಾರ ನಿರ್ಮೂಲನ ಆಂದೋಲನ’ ಕೋರಿದೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಸಾರ್ವಜನಿಕರು ಭ್ರಷ್ಟರ ವಿರುದ್ಧದ ಸಮರದಲ್ಲಿ ಕೈಜೋಡಿಸಬೇಕು. ಆಸಕ್ತರು ಕೂಡಲೇ ನಮ್ಮನ್ನು ಸಂಪರ್ಕಿಸಬೇಕೆಂದು ಆಂದೋಲನದ ರಾಜ್ಯಾಧ್ಯಕ್ಷರು ಮನವಿ ಮಾಡಿದ್ದಾರೆ.

ಸಂಪರ್ಕ ವಿಳಾಸ : ನ್ಯಾಯಮೂರ್ತಿ ವೆಂಕಟಾಚಲ ಭ್ರಷ್ಟಾಚಾರ ನಿರ್ಮೂಲನ ಆಂದೋಲನ, ಬ್ರಿಗೇಡ್‌ ಪ್ಲಾಜಾ, ಆನಂದರಾವ್‌ ವೃತ್ತ, ಬೆಂಗಳೂರು -09. ದೂರವಾಣಿ ಸಂಖ್ಯೆ : 98441-32007/080-32989007.

ಲೋಕ ಕಲ್ಯಾಣ ಯಾತ್ರೆ : ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗಡೆ, ಭ್ರಷ್ಟರ ವಿರುದ್ಧ ತಮ್ಮ ಮೊದಲ ಪ್ರಹಾರವನ್ನು ಆರಂಭಿಸಿದ್ದಾರೆ. ಮಂಡ್ಯ ಜಿಲ್ಲೆಯಿಂದ ಲೋಕಾಯುಕ್ತರ ಲೋಕಕಲ್ಯಾಣಕ್ಕೆ ಚಾಲನೆ ಸಿಗಲಿದೆ. ಮಂಗಳವಾರ ಮೈಸೂರು, ಬುಧವಾರ ಹಾಸನದಲ್ಲಿ ಯಾತ್ರೆ ಮುಂದುವರೆಯಲಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X