ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಿಂದೂ ದೇಗುಲಗಳ ತಂಟೆಗೆ ಹೋಗದಿರಿ : ಹೈಕೋರ್ಟ್
ಹಿಂದೂ
ದೇಗುಲಗಳ
ತಂಟೆಗೆ
ಹೋಗದಿರಿ
:
ಹೈಕೋರ್ಟ್
ಹಿಂದೂ
ಧಾರ್ಮಿಕ
ದತ್ತಿ
ಸಂಸ್ಥೆ
ಕಾಯ್ದೆ
ರದ್ದು,
ಉಡುಪಿ
ಕೃಷ್ಣ
ದೇವಸ್ಥಾನ
ಇನ್ಮುಂದೆ
ಸರ್ಕಾರದಿಂದ
ದೂರ..
ಕರ್ನಾಟಕ ಹಿಂದೂ ಧಾರ್ಮಿಕ ದತ್ತಿ ಸಂಸ್ಥೆ ಕಾಯ್ಡೆಯನ್ನು ಪ್ರಶ್ನಿಸಿ ನೂರಾರು ದೇವಾಲಯಗಳ ಮುಖಂಡರು ಮತ್ತು ಅರ್ಚಕರು ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್, ಕಾಯ್ದೆಯನ್ನು ರದ್ದುಪಡಿಸಿದೆ. ಸಿಖ್, ಜೈನರಿಗೆ ಅನ್ವಯಿಸದ ನಿಯಮಗಳನ್ನು ಹಿಂದೂ ದೇವಸ್ಥಾನಗಳ ಮೇಲೆ ಹೇರುವುದು ಸಲ್ಲದು. ಸರ್ಕಾರದ ಕ್ರಮ ಸಂವಿಧಾನಬಾಹಿರ ಎಂದು ಅಭಿಪ್ರಾಯ ಪಟ್ಟಿದೆ.
ಹೈಕೋರ್ಟ್ ತೀರ್ಪಿನಿಂದ, ಸರ್ಕಾರಕ್ಕೆ ದೇವಸ್ಥಾನಗಳ ಮೇಲಿದ್ದ ಅಧಿಕಾರ ಮೊಟಕುಗೊಳ್ಳಲಿದೆ. ಅರ್ಚಕರ ನೇಮಕ ವಂಶಪಾರಂಪರ್ಯವಾಗಿ ನಡೆಯಲಿದೆ. ಉಡುಪಿಯ ಕೃಷ್ಣ ದೇವಸ್ಥಾನವನ್ನು ವಶಕ್ಕೆ ತೆಗೆದುಕೊಳ್ಳಬೇಕೆಂಬ ಸರ್ಕಾರದ ಕ್ರಮಕ್ಕೆ ಈಗ ಆಸ್ಪದ ಇಲ್ಲದಂತಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Saturday, September 9, 2006, 23:53 [IST]