ಸೋನಿಯಾ ಆತಿಥ್ಯ ಪಡೆದ ಈ ಬೋರೇಗೌಡ ಯಾರು?
ಸೋನಿಯಾ
ಆತಿಥ್ಯ
ಪಡೆದ
ಈ
ಬೋರೇಗೌಡ
ಯಾರು?
ಪ್ರಧಾನಿ
ಹುದ್ದೆ
ಬೇಡ
ಎಂದದ್ದಕ್ಕೆ
ಅಂದು
ಸೋನಿಯಾ
ಅಭಿಮಾನಿಗೆ,
ಹೃದಯಾಘಾತವಾಗಿತ್ತು!
ಯಾರೀತ? ಎಲ್ಲಿಂದ ಬಂದ? ದೊಡ್ಡ ದೊಡ್ಡವರಿಗೆ ಮೇಡಂ ದರ್ಶನ ಕಷ್ಟವಾಗಿರುವಾಗ, ಇವನದು ಭಲೇ ಅದೃಷ್ಟ ಎಂದು ಕಾಂಗ್ರೆಸ್ ಕಾರ್ಯಕರ್ತರು ಪಿಸುಗುಟ್ಟುತ್ತಿದ್ದರು. ಆಮೇಲೆ ವಿಷಯ ತಿಳಿದ ಮೇಲೆ ‘ಅಯ್ಯೋ ಪಾಪ...’ ಎಂದರು.
ಹಿನ್ನೆಲೆ : ಸೋನಿಯಾರಿಂದ ಆತಿಥ್ಯ ಪಡೆದ ವ್ಯಕ್ತಿ ಹೆಸರು ಈರಪ್ಪ. ಪ್ರಧಾನಿ ಹುದ್ದೆ ನಿರಾಕರಿಸಿದ ಸುದ್ದಿ ಕೇಳಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದ ವ್ಯಕ್ತಿಯೋರ್ವನ ತಂದೆಯೇ ಈ ಈರಪ್ಪ.
2004ರ ಮಹಾಚುನಾವಣೆ ನಂತರ ಸೋನಿಯಾ ಪ್ರಧಾನಿ ಹುದ್ದೆಗೇರಲು ಒಲ್ಲೆ ಎಂದಾಗ, ಕೊಪ್ಪಳ ಜಿಲ್ಲೆ ಹಾಗೂ ತಾಲ್ಲೂಕಿನ ಚುಕ್ಕನಕಲ್ ಗ್ರಾಮದ ಸುರೇಶ್ ಮೂಲೀಮನಿ(26) ಎಂಬ ತರುಣ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದ. ಕಾಂಗ್ರೆಸ್ ಹಾಗೂ ಸೋನಿಯಾ ಅಭಿಮಾನಿಯಾಗಿದ್ದ ಈತ, ಈರಪ್ಪ ಮತ್ತು ಶಾವಂತ್ರಮ್ಮ ಎಂಬ ದಂಪತಿಗಳ ಏಕೈಕ ಪುತ್ರ.
ಮೃತ ಸುರೇಶ್ ತಂದೆ ಈರಪ್ಪ, ಸೋನಿಯಾ ಭೇಟಿಗಾಗಿ, ಭಾನುವಾರ(ಸೆಪ್ಟೆಂಬರ್ 3) ನಗರಕ್ಕೆ ಆಗಮಿಸಿದ್ದರು. ಸೋನಿಯಾ ರ್ಯಾಲಿ ಮುಗಿಸಿ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಊಟ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಈರಪ್ಪ ಬಂದಿರುವ ವಿಷಯವನ್ನು ಸೋನಿಯಾಗೆ ತಿಳಿಲಾಯಿತು. ತಕ್ಷಣವೇ ಈರಪ್ಪನನ್ನು ತಮ್ಮ ಬಳಿ ಕರೆದುಕೊಂಡು ಬರುವಂತೆ ಪಕ್ಷದ ನಾಯಕರಿಗೆ ಹೇಳಿದರು.
ಆನಂತರ ಸೋನಿಯಾ ತಮ್ಮ ಸಮ್ಮುಖದಲ್ಲೇ ಈರಪ್ಪನನ್ನು ಊಟಕ್ಕೆ ಕೂರಿಸಿಕೊಂಡು ಸಾಂತ್ವನ ಹೇಳಿದರು. ಅಲ್ಲದೆ ಒಂದು ಲಕ್ಷ ರೂಪಾಯಿ ಮೊತ್ತದ ಚೆಕ್ ನೀಡಿ ನೆರವಾದರು. ಸೋನಿಯಾ ಅವರ ಮಾನವೀಯ ಪ್ರೀತಿಗೆ ಈರಪ್ಪನ ಕಣ್ಣಲ್ಲಿ ನೀರು ಹರಿಯಿತು. ಸುತ್ತಮುತ್ತಲಿನ ಜನರು ಈ ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾದರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾಟ್ಸ್ ಹಾಟ್