ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ಸೋನಿಯಾ ಮ್ಯಾಜಿಕ್ನಿಂದ ದೋಸ್ತಿ ಸರ್ಕಾರ ಬೀಳುತ್ತೆ’
‘ಸೋನಿಯಾ
ಮ್ಯಾಜಿಕ್ನಿಂದ
ದೋಸ್ತಿ
ಸರ್ಕಾರ
ಬೀಳುತ್ತೆ’
ರ್ಯಾಲಿಯಲ್ಲಿ
ಐದು
ಲಕ್ಷ
ಕಾಂಗ್ರೆಸ್
ಕಾರ್ಯಕರ್ತರು
ಭಾಗವಹಿಸುವ
ನಿರೀಕ್ಷೆ
ರ್ಯಾಲಿ ಹಿನ್ನೆಲೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಮಾಜಿ ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ, ಅರಮನೆ ಮೈದಾನದಲ್ಲಿನ ಈ ರ್ಯಾಲಿಯಲ್ಲಿ ಎಐಪಿಜೆಡಿ, ಕಾಂಗ್ರೆಸ್ನಲ್ಲಿ ವಿಲೀನವಾಗಲಿದೆ. ಭಾನುವಾರ(ಸೆ.3) ನಡೆಯಲಿರುವ ರ್ಯಾಲಿ ಪರಿಣಾಮ ಕುಮಾರಸ್ವಾಮಿ ಸರ್ಕಾರದ ಕ್ಷಣಗಣನೆ ಆರಂಭಗೊಂಡಿದೆ ಎಂದಿದ್ದಾರೆ.
ಕಾಂಗ್ರೆಸ್ ರ್ಯಾಲಿ ಮತ್ತು ಜೆಡಿಎಸ್ನೊಳಗಿನ ಭಿನ್ನಮತದ ಹಿನ್ನೆಲೆಯಲ್ಲಿ ಅಮೆರಿಕಾ ಪ್ರವಾಸವನ್ನು ಕುಮಾರಸ್ವಾಮಿ ರದ್ದುಗೊಳಿಸಿದ್ದಾರೆ. ಆದರೆ ಅವರ ಸರ್ಕಾರಕ್ಕೆ ಭವಿಷ್ಯವಿಲ್ಲ. ದೇವೇಗೌಡರ ತಂತ್ರಗಳು ಫಲಿಸುವುದಿಲ್ಲ. ಕೋಮುವಾದಿ ಶಕ್ತಿಗಳು ಮತ್ತು ಹುಸಿ ಜಾತ್ಯತೀತ ಶಕ್ತಿಗಳು ರಾಜ್ಯವಾಳಲು ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Saturday, September 2, 2006, 23:53 [IST]