ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶತ್ರುಗಳ ವಿನಾಶಕ್ಕೆ ಕುಮಾರಸ್ವಾಮಿ ತಂತ್ರ ಏನ್‌ ಗೊತ್ತಾ?

By Staff
|
Google Oneindia Kannada News

ಶತ್ರುಗಳ ವಿನಾಶಕ್ಕೆ ಕುಮಾರಸ್ವಾಮಿ ತಂತ್ರ ಏನ್‌ ಗೊತ್ತಾ?
ಚಿದಂಬರಂನ ಆಕಾಶಲಿಂಗ ದೇವಸ್ಥಾನದಲ್ಲಿ ಸುದರ್ಶನ ಯಾಗ!

ಬೆಂಗಳೂರು : ತಮ್ಮ ಮುಖ್ಯಮಂತ್ರಿಕುರ್ಚಿಯ ಕಾಲುಗಳು ಅಲುಗಾಡುತ್ತಿವೆ ಎಂಬ ಆತಂಕ ಎಚ್‌.ಡಿ.ಕುಮಾರಸ್ವಾಮಿ ಅವರಿಗಿದೆ. ಹೀಗಾಗಿಯೇ ತಮ್ಮ ಶತ್ರುಗಳ ವಿನಾಶಕ್ಕಾಗಿ ಸುದರ್ಶನಯಾಗವನ್ನು ತಮ್ಮ ಪರಿವಾರದೊಂದಿಗೆ ಅವರು ನಡೆಸಿದ್ದಾರೆ.

ತಮ್ಮ ಪಾಲಿಗೆ ಅದೃಷ್ಟದ ದಿನವಾದ ಮಂಗಳವಾರ ತಮಿಳುನಾಡಿನ ಚಿದಂಬರಂಗೆ ಹೆಲಿಕಾಪ್ಟರ್‌ನಲ್ಲಿ ತೆರಳಿದ್ದ ಕುಮಾರಸ್ವಾಮಿ, ಅಲ್ಲಿನ ಆಕಾಶಲಿಂಗ ದೇವಸ್ಥಾನದಲ್ಲಿ ಧಾರ್ಮಿಕ ವಿಧಿಗಳನ್ನು ಪೂರೈಸಿದರು. ಈ ಸಂದರ್ಭದಲ್ಲಿ ಎಚ್‌.ಡಿ.ದೇವೇಗೌಡ, ಚೆನ್ನಮ್ಮ, ಎಚ್‌.ಡಿ.ರೇವಣ್ಣ ಸೇರಿದಂತೆ ಮುಖ್ಯಮಂತ್ರಿಗಳ ಕುಟುಂಬದ ವಿವಿಧ ಸದಸ್ಯರು ಹಾಜರಿದ್ದರು.

ಕಳೆದ ವಾರ ತಮಿಳುನಾಡಿನ ಶ್ರೀರಂಗಕ್ಕೆ ತೆರಳಿದ್ದ ಕುಮಾರಸ್ವಾಮಿ ಮತ್ತು ಅವರ ಪತ್ನಿ, ವಿಶೇಷ ಪೂಜೆ ಸಲ್ಲಿಸಿದ್ದರು. ಸರ್ಕಾರವನ್ನು ದೇವರೇ ಕಾಯುತ್ತಾನೆ ಎಂಬುದು ಅವರ ನಂಬಿಕೆಯಿರಬೇಕು!

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಕುಮಾರ-ಪರ್ವ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X