ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಲಮಟ್ಟಿಗೆ ಉರುಳಿದ ಟೆಂಪೋ : 25 ಮಂದಿ ಕೃಷ್ಣೆ ಪಾಲು

By Staff
|
Google Oneindia Kannada News

ಆಲಮಟ್ಟಿಗೆ ಉರುಳಿದ ಟೆಂಪೋ : 25 ಮಂದಿ ಕೃಷ್ಣೆ ಪಾಲು
30 ಜನರನ್ನು ಹೇರಿದ್ದ ಟೆಂಪೊ, 6 ಜನ ಈಜಿ ಪಾರು

ಬೆಂಗಳೂರು : ಬಿಜಾಪುರ ಜಿಲ್ಲೆಯ ಆಲಮಟ್ಟಿ ಜಲಾಶಯದ ಬಳಿ ಕೃಷ್ಣಾ ನದಿಗೆ ಟೆಂಪೊವೊಂದು ಉರುಳಿದೆ. ಈ ಘಟನೆಯಲ್ಲಿ ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 25ಮಂದಿ ಜಲಸಮಾಧಿಯಾಗಿದ್ದಾರೆ.

ಈ ಭೀಕರ ದುರಂತ ಮಂಗಳವಾರ(ಆ.29) ಸಂಭವಿಸಿದೆ. ಕೊಪ್ಪಳ ಜಿಲ್ಲೆಯ ಹೊಸ ಹಳ್ಳಿಯ 30ಮಂದಿ, ಈ ನತದೃಷ್ಟ ವಾಹನದಲ್ಲಿ ಪ್ರವಾಸ ಕೈಗೊಂಡಿದ್ದರು. ಕೂಡಲಸಂಗಮ ಕ್ಷೇತ್ರವನ್ನು ಸಂದರ್ಶಿಸಿ, ಆಲಮಟ್ಟಿ ಜಲಾಶಯದತ್ತ ಟೆಂಪೋ ಬರುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ಜಲಾಶಯಕ್ಕೆ ಟೆಂಪೋ ಉರುಳಿತು ಎನ್ನಲಾಗಿದೆ.

ಆರುಮಂದಿ ಈಜಿ ದಡ ಸೇರಿದ್ದಾರೆ. ಅಗತ್ಯ ಕಾರ್ಯಗಳು ಬಿರುಸಿನಿಂದ ನಡೆದಿವೆ ಎಂದು ಬಿಜಾಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

(ಯುಎನ್‌ಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X