ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ದಿನ 84ಸಾವಿರ ಗಣಪತಿ ವಿಗ್ರಹಗಳ ವಿಸರ್ಜನೆ

By Staff
|
Google Oneindia Kannada News

ಒಂದೇ ದಿನ 84ಸಾವಿರ ಗಣಪತಿ ವಿಗ್ರಹಗಳ ವಿಸರ್ಜನೆ
ಪರಿಸರ ಮಾಲಿನ್ಯ ತಡೆಯಲು ಮಹಾನಗರ ಪಾಲಿಕೆಯಿಂದ ವ್ಯಾಪಕ ಕ್ರಮ

ಬೆಂಗಳೂರು : ಈ ವರ್ಷದ ಗಣೇಶ ಚತುರ್ಥಿಯ ಒಂದೇ ದಿನದ ಅವಧಿಯಲ್ಲಿ, ಸುಮಾರು 84ಸಾವಿರ ಗಣೇಶನ ವಿಗ್ರಹಗಳನ್ನು ನಗರದಲ್ಲಿ ವಿಸರ್ಜನೆ ಮಾಡಲಾಗಿದೆ ಎಂದು ಮಹಾನಗರ ಪಾಲಿಕೆಯ ಮೂಲಗಳು ತಿಳಿಸಿವೆ.

ಗಣೇಶನ ವಿಸರ್ಜನೆಗಾಗಿ ಹಲಸೂರು, ಯಡಿಯೂರು ಮತ್ತು ಸ್ಯಾಂಕಿ ಕೆರೆಗಳ ಬಳಿ ಪ್ರತ್ಯೇಕ ಕಲ್ಯಾಣಿಗಳನ್ನು ನಿರ್ಮಾಣ ಮಾಡಲಾಗಿತ್ತು. ಪಾಲಿಕೆಯ ಸಿಬ್ಬಂದಿ ಮತ್ತು ಪೊಲೀಸರು ವಿಸರ್ಜನಾ ಕಾರ್ಯಕ್ಕೆ ನೆರವು ನೀಡಿದ್ದಾರೆ. ವಿಸರ್ಜನೆಗೆ ಮೊದಲು ಗಣೇಶನ ವಿಗ್ರಹದ ಮೇಲಿನ ಹೂವಿನ ಹಾರ ಮತ್ತಿತರ ಪೂಜಾ ಸಾಮಾಗ್ರಿಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಜಲ ಮಾಲಿನ್ಯವನ್ನು ತಪ್ಪಿಸಲಾಗಿದೆ.

ವಿಸರ್ಜನೆಗೆ ಈ ವ್ಯವಸ್ಥೆ ಮಾತ್ರವಲ್ಲದೇ, 9 ಸಂಚಾರಿ ವಿಸರ್ಜನಾ ಟ್ಯಾಂಕ್‌ಗಳನ್ನು ಬಳಸಿಕೊಳ್ಳಲಾಗಿತ್ತು ಎಂದು ಪಾಲಿಕೆ ಹೇಳಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X