ಬೆಳಗಾವಿ ಆಸೆಗೆ ತಣ್ಣೀರು : ಮಹಾರಾಷ್ಟ್ರಕ್ಕೆ ಮುಖಭಂಗ
ಬೆಳಗಾವಿ
ಆಸೆಗೆ
ತಣ್ಣೀರು
:
ಮಹಾರಾಷ್ಟ್ರಕ್ಕೆ
ಮುಖಭಂಗ
ಸುಪ್ರೀಂಕೋರ್ಟ್ನಲ್ಲಿ
ಹೋರಾಟ
ಮುಂದುವರೆಯಲಿದೆ
-ವಿಲಾಸರಾವ್
ದೇಶ್ಮುಖ್
ಹೌದು, ಕರ್ನಾಟಕದ ವಿರುದ್ಧ ಮಹಾರಾಷ್ಟ್ರ ಸಲ್ಲಿಸಿರುವ ಗಡಿ ತಂಟೆಯ ಅರ್ಜಿಯನ್ನು ಮಾನ್ಯ ಮಾಡದಂತೆ, ಸುಪ್ರೀಂ ಕೋರ್ಟ್ಗೆ ಕೇಂದ್ರ ಮನವಿ ಸಲ್ಲಿಸಿದೆ. ಮಹಾರಾಷ್ಟ್ರದ ಅರ್ಜಿಯಲ್ಲಿ ಹುರುಳಿಲ್ಲ. ಅರ್ಜಿಯ ಪ್ರತಿ ಪ್ಯಾರಾದಲ್ಲೂ ದೋಷಗಳಿವೆ. ಬಹುಭಾಷೀಯರಿರುವ ದೇಶದಲ್ಲಿ, ಭಾಷೆಯಾಧಾರಿತವಾಗಿ ವರ್ಗೀಕರಣದಲ್ಲಿ ಅರ್ಥವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳು ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಈ ವಿಚಾರದಲ್ಲಿ ಕೇಂದ್ರ ಮಧ್ಯೆ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟವಾಗಿ ಕೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದೆ.
ಕೇಂದ್ರದ ನಿಲುವನ್ನು ರಾಜ್ಯದ ಮುಖಂಡರು ಸ್ವಾಗತಿಸಿದ್ದು, ಮಹಾಜನ್ ವರದಿ ಅನುಷ್ಠಾನಕ್ಕೆ ಮಹಾರಾಷ್ಟ್ರ ಈಗಲಾದರೂ ಒಪ್ಪಬೇಕು ಎಂದಿದ್ದಾರೆ.
ಮಹಾರಾಷ್ಟ್ರ ಸಿಡಿಮಿಡಿ : ಬೆಳಗಾವಿ ನಮ್ಮದು. ಅದು ಕೈತಪ್ಪಲು ನಾವು ಬಿಡುವುದಿಲ್ಲ. ಇನ್ನೂ ಒಳ್ಳೆಯ ವಕೀಲರನ್ನು ನೇಮಿಸಿ, ಸುಪ್ರೀಂಕೋರ್ಟ್ನಲ್ಲಿ ಹೋರಾಟ ನಡೆಸುತ್ತೇವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸರಾವ್ ದೇಶಮುಖ್ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ಕುಮಾರ-ಪರ್ವ