ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿರಿಕ್‌ಗೆ ಬ್ರೇಕ್‌ : ವಾಹನ ಮಾಲೀಕರಿಗೆ ಸ್ಮಾರ್ಟ್‌ ಕಾರ್ಡ್‌

By Staff
|
Google Oneindia Kannada News

ಕಿರಿಕ್‌ಗೆ ಬ್ರೇಕ್‌ : ವಾಹನ ಮಾಲೀಕರಿಗೆ ಸ್ಮಾರ್ಟ್‌ ಕಾರ್ಡ್‌
ದಾವಣಗೆರೆ, ಹಾಸನ, ಹಾವೇರಿಯಲ್ಲಿ ಸಾರಿಗೆ ಇಲಾಖೆಗೆ ನೂತನ ಕಟ್ಟಡ

ಬೆಂಗಳೂರು : ವಾಹನ ಮಾಲೀಕರಿಗೆ ಸ್ಮಾರ್ಟ್‌ ಕಾರ್ಡ್‌ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಸಾರಿಗೆ ಇಲಾಖೆ ಆಯುಕ್ತ ಎಂ.ಸಿ.ನಾರಾಯಣ ಗೌಡ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಈ ಕಾರ್ಡ್‌ನಿಂದ ಸಾಕಷ್ಟು ಕಿರಿಕಿರಿಗಳು ತಪ್ಪಲಿವೆ. ಎಲ್ಲಾ ದಾಖಲೆಗಳನ್ನು ವಾಹನದಲ್ಲಿಟ್ಟುಕೊಳ್ಳುವುದು ತಪ್ಪಲಿದೆ. ವಾಹನಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಈ ಸ್ಮಾರ್ಟ್‌ ಕಾರ್ಡ್‌ ಒಳಗೊಂಡಿರುತ್ತದೆ ಎಂದರು.

ಸಾರಿಗೆ ಇಲಾಖೆ ಕಚೇರಿಗಳ ನಿರ್ಮಾಣಕ್ಕಾಗಿ ಹತ್ತು ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಮಡಿಕೇರಿ, ದಾವಣಗೆರೆ, ಹಾಸನ, ಹಾವೇರಿ, ಬಾಗಲಕೋಟೆಯಲ್ಲಿ ಕಟ್ಟಡ ಕಾಮಗಾರಿ ಆರಂಭಗೊಂಡಿದೆ. ಜೊತೆಗೆ ಸಾರಿಗೆ ಇಲಾಖೆಯ ನವೀಕರಣ ಪ್ರಕ್ರಿಯೆ ಆರಂಭಗೊಂಡಿದೆ ಎಂದು ನಾರಾಯಣ ಗೌಡ ಹೇಳಿದರು.

(ಯುಎನ್‌ಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X