ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನವೆಂಬರ್ 1ರ ವೇಳೆಗೆ ಬ್ಯಾಂಗಲೋರ್; ಬೆಂಗಳೂರು?
ಜನಮತಕ್ಕೆ ಸಮ್ಮತಿಸಿ, ಹೆಸರು ಬದಲಿಸಲು ನಮ್ಮ ಸರ್ಕಾರ ಸಿದ್ಧವಿದೆ. ನ.1ರಿಂದ ಬ್ಯಾಂಗಲೋರ್, ಬೆಂಗಳೂರು ಆಗಲಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಆದರೆ ಈ ನಿಟ್ಟಿನಲ್ಲಿ ಆಡಳಿತ ಯಂತ್ರ ತಲೆಕೆಡಿಸಿಕೊಂಡಿಲ್ಲ. ಹೆಸರು ಬದಲಿಸಲು ಅಗತ್ಯ ಪ್ರಕ್ರಿಯೆಗಳತ್ತ ಗಮನಹರಿಸಿಲ್ಲ. ಪ್ರಕ್ರಿಯೆಗಳು ಈಗ ಆರಂಭಗೊಂಡರೆ ಮುಂದಿನ ರಾಜ್ಯೋತ್ಸವ(ನ.1.2007)ದ ಹೊತ್ತಿಗೆ ಬ್ಯಾಂಗ್ಲೂರ್, ಬೆಂಗಳೂರು ಆಗಬಹುದು ಎನ್ನಲಾಗಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿ ಅವರ ಸಲಹೆಯಂತೆ, ಬ್ಯಾಂಗಲೋರ್ನ್ನು ಬೆಂಗಳೂರು ಮಾಡಲು ಹಿಂದಿನ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ನಿರ್ಧರಿಸಿದ್ದರು. ಅಷ್ಟರಲ್ಲಿ ಸರ್ಕಾರಗಳು ಅದಲುಬದಲಾದವು. ಬದಲಾವಣೆ ಪ್ರಕ್ರಿಯೆಗೆ ಚಾಲನೆ ಸಿಗಲೇ ಇಲ್ಲ.
Comments
ಬೆಂಗಳೂರು ಅನಂತಮೂರ್ತಿ bangalore bengaluru hd kumaraswamy dharam singh chennai government of karnataka rajyotsava
Story first published: Monday, March 8, 2010, 17:00 [IST]