ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಆತ್ಮಹತ್ಯೆ : ಕೇಂದ್ರದಿಂದ ತಜ್ಞರ ಸಮಿತಿ ರಚನೆ

By Staff
|
Google Oneindia Kannada News

ರೈತರ ಆತ್ಮಹತ್ಯೆ : ಕೇಂದ್ರದಿಂದ ತಜ್ಞರ ಸಮಿತಿ ರಚನೆ
ಸರ್ವಪಕ್ಷಗಳ ಒತ್ತಾಯ, ಕೊನೆಗೂ ಮಣಿದ ಸರ್ಕಾರ

ನವದೆಹಲಿ : ರೈತರನ್ನು ಸಾಲದ ಬಾಧೆ ಹಾಗೂ ಆತ್ಮಹತ್ಯೆಯಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರ ಮುಂದಾಗಿದ್ದು ಈ ಸಂಬಂಧ ನಾಲ್ವರು ತಜ್ಞರ ಸಮಿತಿ ರಚಿಸಿದೆ.

ಮುಂಬಯಿಯಲ್ಲಿರುವ ಇಂದಿರಾಗಾಂಧಿ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಆರ್‌.ರಾಧಾಕೃಷ್ಣನ್‌, ನಬಾರ್ಡ್‌ ವ್ಯವಸ್ಥಾಪಕ ನಿರ್ದೇಶಕ ವೈ.ಎಸ್‌.ಪಿ.ಥೋರಟ್‌, ಸಿಂಡಿಕೇಟ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಕಾಂತಾಕುಮಾರ್‌ ಹಾಗೂ ಕೇಂದ್ರ ಕೃಷಿ ಖಾತೆಯ ಮಾಜಿ ಕಾರ್ಯದರ್ಶಿ ಪಿ.ಡಿ.ಶೆಣೈ ಸಮಿತಿ ಸದಸ್ಯರಾಗಿದ್ದಾರೆ. ನವೆಂಬರ್‌ 30ರೊಳಗೆ ವರದಿ ಸಲ್ಲಿಸಲು ಸಮಿತಿ ಸೂಚಿಸಲಾಗಿದೆ.

ದೇಶಾದ್ಯಂತ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸಮಸ್ಯೆಗೆ ಪರಿಹಾರ ಕಂಡುಹಿಡಿಯುವಂತೆ ಸಂಸತ್ತಿನ ಸದಸ್ಯರೆಲ್ಲ ಪಕ್ಷಭೇದ ಮರೆತು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಸರ್ಕಾರದ ಈ ಕ್ರಮವನ್ನು ಸಂಸದರೆಲ್ಲ ಸ್ವಾಗತಿಸಿದ್ದಾರೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X