ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಕೆಟಿಗ ವೆಂಕಟೇಶ್‌ ಪ್ರಸಾದ್‌ಗೆ ಹೈಕೋರ್ಟ್‌ ನೋಟಿಸ್‌

By Staff
|
Google Oneindia Kannada News

ಕ್ರಿಕೆಟಿಗ ವೆಂಕಟೇಶ್‌ ಪ್ರಸಾದ್‌ಗೆ ಹೈಕೋರ್ಟ್‌ ನೋಟಿಸ್‌
ವೆಂಕಟೇಶ ಪ್ರಸಾದ್‌ ವಿರುದ್ಧ ಆದಾಯ ತೆರಿಗೆ ಪಾವತಿಸದ ದೂರು

ಬೆಂಗಳೂರು : ಆದಾಯ ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ, ಮಾಜಿ ಕ್ರಿಕೆಟ್‌ಪಟು ಬಿ.ಕೆ.ವೆಂಕಟೇಶಪ್ರಸಾದ್‌ ಅವರಿಗೆ ಹೈಕೋರ್ಟ್‌ ತುರ್ತು ನೋಟಿಸ್‌ ಜಾರಿ ಮಾಡಿದೆ.

1997-98ರ ಅವಧಿಯಲ್ಲಿ ವೆಂಕಟೇಶ ಪ್ರಸಾದ್‌ ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿರುವುದು ವಿವಾದಕ್ಕೆ ಕಾರಣವಾಗಿದೆ. ಪ್ರಕರಣ ನ್ಯಾಯಾಲಯದ ಕಟ್ಟೇ ಏರಿದೆ. ತೆರಿಗೆ ವಿನಾಯಿತಿ ಪ್ರಶ್ನಿಸಿ, ಆದಾಯ ತೆರಿಗೆ ಆಯುಕ್ತರು ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್‌ ವಿಭಾಗೀಯ ಪೀಠ ಕೈಗೆತ್ತಿಕೊಂಡಿದೆ.

ಹಿನ್ನೆಲೆ : ಕ್ರಿಕೆಟಿಗರ ಕ್ರಿಕೆಟ್‌ ಮಂಡಳಿಯ ಹಣ, ಜಾಹೀರಾತಿನ ಹಣ, ಬಹುಮಾನದ ಹಣ ಸೇರಿದಂತೆ ವಿವಿಧ ಆದಾಯಕ್ಕೆ ಸರ್ಕಾರ ತೆರಿಗೆ ವಿನಾಯಿತಿ ನೀಡಿತ್ತು. 1981ರಲ್ಲಿ ಈ ನಿಯಮವನ್ನು ಸರ್ಕಾರ ಅನುಸರಿಸಿತ್ತು. 1997ರಲ್ಲಿ ತೆರಿಗೆ ವಿನಾಯಿತಿ ನಿಯಮವನ್ನು ಸರ್ಕಾರ ರದ್ದುಪಡಿಸಿತ್ತು. ಆದರೆ ವೆಂಕಟೇಶ ಪ್ರಸಾದ್‌ 1997-98ರ ಅವಧಿಯಲ್ಲೂ ತೆರಿಗೆ ವಿನಾಯಿತಿ ಪಡೆದಿರುವುದು ವಿವಾದದ ಮೂಲ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X