ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ 102 ತಾಲೂಕುಗಳಲ್ಲಿ ಮಳೆಯಿಲ್ಲ, ಬೆಳೆಯಿಲ್ಲ..

By Staff
|
Google Oneindia Kannada News

ರಾಜ್ಯದ 102 ತಾಲೂಕುಗಳಲ್ಲಿ ಮಳೆಯಿಲ್ಲ, ಬೆಳೆಯಿಲ್ಲ..
ಇನ್ನಷ್ಟು ತಾಲ್ಲೂಕುಗಳ ಸೇರ್ಪಡೆ ಸಂಭವ, ವಿವರ ನೀಡಲು ಶಾಸಕರಿಗೆ ಸೂಚನೆ

ಬೆಂಗಳೂರು : ರಾಜ್ಯಾದ್ಯಂತ ಮುಂಗಾರು ಮಳೆ ಕ್ಷೀಣಗೊಂಡ ಹಿನ್ನೆಲೆಯಲ್ಲಿ 102 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಸಚಿವ ಸಂಪುಟ ಘೋಷಿಸಿದೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಸವರಾಜ ಹೊರಟ್ಟಿ, ಸಂಪುಟ ಸಭೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡುತ್ತಿದ್ದರು.

ಕೇಂದ್ರದ ಮಾರ್ಗದರ್ಶನದ ಪ್ರಕಾರ, ಸತತ ನಾಲ್ಕು ವಾರಗಳ ಕಾಲ ಮಳೆ ಬೀಳದ ತಾಲ್ಲೂಕನ್ನು ಬರಪೀಡಿತ ಎನ್ನಲಾಗುತ್ತದೆ. ರಾಜ್ಯದಲ್ಲಿ ಇಂತಹ ತಾಲ್ಲೂಕುಗಳ ಸಂಖ್ಯೆ 102. ಅವುಗಳ ಪೈಕಿ 74 ತಾಲ್ಲೂಕುಗಳಲ್ಲಂತೂ ಮಳೆ ಸಮಸ್ಯೆ ಹೆಚ್ಚಿದೆ. ಕಳೆದ ಕೆಲವು ವಾರಗಳಿಂದ ಹವಾಮಾನ ಆಶಾದಾಯಕವಾಗಿಲ್ಲ. ಹಾಗಾಗಿ ಇನ್ನೂ ಕೆಲವು ತಾಲ್ಲೂಕುಗಳು ಬರಪೀಡಿತ ತಾಲ್ಲೂಕುಗಳ ಪಟ್ಟಿಗೆ ಸೇರುವ ಸಾಧ್ಯತೆ ಇದೆ ಎಂದು ಅವರು ಸಂದೇಹ ವ್ಯಕ್ತಪಡಿಸಿದರು.

ಕಂದಾಯ ಸಚಿವ ಜಗದೀಶ್‌ ಶೆಟ್ಟರ್‌ ನೇತೃತ್ವದ ಸಂಪುಟ ಉಪಸಮಿತಿ, ಬರ ಪರಿಹಾರ ಕಾರ್ಯದತ್ತ ನಿಗಾವಹಿಸಲಿದೆ ಎಂದರು.

(ಯುಎನ್‌ಐ)

ಮುಖಪುಟ / ಕುಮಾರ-ಪರ್ವ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X