For Daily Alerts
ರಾಜ್ಯದ 102 ತಾಲೂಕುಗಳಲ್ಲಿ ಮಳೆಯಿಲ್ಲ, ಬೆಳೆಯಿಲ್ಲ..
ರಾಜ್ಯದ
102
ತಾಲೂಕುಗಳಲ್ಲಿ
ಮಳೆಯಿಲ್ಲ,
ಬೆಳೆಯಿಲ್ಲ..
ಇನ್ನಷ್ಟು
ತಾಲ್ಲೂಕುಗಳ
ಸೇರ್ಪಡೆ
ಸಂಭವ,
ವಿವರ
ನೀಡಲು
ಶಾಸಕರಿಗೆ
ಸೂಚನೆ
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಸವರಾಜ ಹೊರಟ್ಟಿ, ಸಂಪುಟ ಸಭೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡುತ್ತಿದ್ದರು.
ಕೇಂದ್ರದ ಮಾರ್ಗದರ್ಶನದ ಪ್ರಕಾರ, ಸತತ ನಾಲ್ಕು ವಾರಗಳ ಕಾಲ ಮಳೆ ಬೀಳದ ತಾಲ್ಲೂಕನ್ನು ಬರಪೀಡಿತ ಎನ್ನಲಾಗುತ್ತದೆ. ರಾಜ್ಯದಲ್ಲಿ ಇಂತಹ ತಾಲ್ಲೂಕುಗಳ ಸಂಖ್ಯೆ 102. ಅವುಗಳ ಪೈಕಿ 74 ತಾಲ್ಲೂಕುಗಳಲ್ಲಂತೂ ಮಳೆ ಸಮಸ್ಯೆ ಹೆಚ್ಚಿದೆ. ಕಳೆದ ಕೆಲವು ವಾರಗಳಿಂದ ಹವಾಮಾನ ಆಶಾದಾಯಕವಾಗಿಲ್ಲ. ಹಾಗಾಗಿ ಇನ್ನೂ ಕೆಲವು ತಾಲ್ಲೂಕುಗಳು ಬರಪೀಡಿತ ತಾಲ್ಲೂಕುಗಳ ಪಟ್ಟಿಗೆ ಸೇರುವ ಸಾಧ್ಯತೆ ಇದೆ ಎಂದು ಅವರು ಸಂದೇಹ ವ್ಯಕ್ತಪಡಿಸಿದರು.
ಕಂದಾಯ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದ ಸಂಪುಟ ಉಪಸಮಿತಿ, ಬರ ಪರಿಹಾರ ಕಾರ್ಯದತ್ತ ನಿಗಾವಹಿಸಲಿದೆ ಎಂದರು.
(ಯುಎನ್ಐ)
ಮುಖಪುಟ / ಕುಮಾರ-ಪರ್ವ
Story first published: Friday, August 25, 2006, 23:53 [IST]