ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈಗಾರಿಕಾ ಕ್ರಾಂತಿ ಶುರು : ಹೊಸ ನೀತಿಗೆ ಸಂಪುಟ ಒಪ್ಪಿಗೆ

By Staff
|
Google Oneindia Kannada News

ಕೈಗಾರಿಕಾ ಕ್ರಾಂತಿ ಶುರು : ಹೊಸ ನೀತಿಗೆ ಸಂಪುಟ ಒಪ್ಪಿಗೆ
500 ಎಕರೆ ಕೈಗಾರಿಕಾ ವಲಯ ವಿಸ್ತರಣೆ -ಬಸವರಾಜ ಹೊರಟ್ಟಿ

ಬೆಂಗಳೂರು : ರಾಜ್ಯ ಸಚಿವ ಸಂಪುಟ 2006-11ನೇ ಸಾಲಿನ ಹೊಸ ಕೈಗಾರಿಕಾ ನೀತಿಗೆ ಗುರುವಾರ(ಆ.24) ಅನುಮೋದನೆ ನೀಡಿದೆ.

ಸಂಪುಟ ಸಭೆ ನಂತರ ಈ ಬಗ್ಗೆ ಸುದ್ದಿಗಾರರೊಂದಿಗೆ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಮಾತನಾಡುತ್ತಿದ್ದರು. ಹೊಸ ನೀತಿಯನ್ವಯ ರಾಜ್ಯದಲ್ಲಿ ಕೈಗಾರಿಕೆಗಳು ಬೆಳೆಯಲಿವೆ. 500 ಎಕರೆಗೂ ಅಧಿಕ ಕೈಗಾರಿಕಾ ವಲಯ ವಿಸ್ತಾರಗೊಳ್ಳಲಿದೆ ಎಂದರು.

ಮಾಲೂರು, ಬಾಗಲಕೋಟೆ, ಮದ್ದೂರು, ಹಿರಿಯೂರು, ಜೇವರ್ಗಿ ಮತ್ತು ಬೆಳಗಾವಿಯಲ್ಲಿ ಮುಂದಿನ ವರ್ಷ ಆಹಾರ ಪಾರ್ಕ್‌ಗಳು ತಲೆ ಎತ್ತಲಿವೆ. ಹಾಸನ, ಮಂಗಳೂರು, ಶಿವಮೊಗ್ಗದಲ್ಲಿ ಸರ್ಕಾರ ವಿಶೇಷ ಆರ್ಥಿಕ ವಲಯ ರೂಪಿಸಲಿದೆ. ಹತ್ತು ಹಲವು ಕಾರ್ಯಕ್ರಮಗಳು ಕೈಗಾರಿಕೆಗಳನ್ನು ರಾಜ್ಯದಲ್ಲಿ ಭದ್ರಪಡಿಸಲಿವೆ ಎಂದರು.

(ಯುಎನ್‌ಐ)

ಮುಖಪುಟ / ಕುಮಾರ-ಪರ್ವ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X