‘ವಂದೇ ಮಾತರಂ’ ವಿವಾದ : ಕೇಂದ್ರದ ವಿರುದ್ಧ ಕೆಂಡ
‘ವಂದೇ
ಮಾತರಂ’
ವಿವಾದ
:
ಕೇಂದ್ರದ
ವಿರುದ್ಧ
ಕೆಂಡ
ಅಶ್ಲೀಲವಾಗಿ
ಹಿಂದೂ
ದೇವರುಗಳ
ಚಿತ್ರಣ,
ಜಾಟ್-ಸಿಖ್
ಸಮುದಾಯಗಳಿಗೆ
ಅವಮಾನ
-ಬಿಜೆಪಿ
ಮಂಗಳವಾರ(ಆಗಸ್ಟ್ 22) ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಯಿತು. ಸಭೆಯ ನಂತರ ಸುದ್ದಿಗಾರರೊಂದಿಗೆ ಬಿಜೆಪಿ ಸಂಸದೀಯ ಪಕ್ಷದ ವಕ್ತಾರ ವಿಜಯ್ಕುಮಾರ್ ಮಲ್ಹೋತ್ರಾ ಮಾತನಾಡಿದರು.
ಸಂಸತ್ ಕೂಡ ವಂದೇ ಮಾತರಂ ಹಾಡಿನ ಮೂಲಕ ಕಲಾಪ ಮುಕ್ತಾಯಗೊಳಿಸಬೇಕಾಗುತ್ತದೆ. ಇದು ಸಂಪ್ರದಾಯ. ಆದರೆ, ಮುಸ್ಲಿಂ ವಿದ್ಯಾರ್ಥಿಗಳು ವಂದೇ ಮಾತರಂ ಗೀತೆ ಹಾಡುವುದು ಐಚ್ಛಿಕ ಎಂದು ಹೇಳುವ ಮೂಲಕ, ಸಚಿವ ಅರ್ಜುನ್ಸಿಂಗ್ ಸ್ವಾತಂತ್ರ್ಯ ಹೋರಾಟಗಾರರ ಭಾವನೆಗಳಿಗೆ ಹಾಗೂ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅವಮಾನ ಮಾಡಿದ್ದಾರೆ ಎಂದು ಹೇಳಿದರು.
ಎನ್ಸಿಇಆರ್ಟಿ ಪಠ್ಯಪುಸ್ತಕಗಳಲ್ಲಿ ಜಾಟ್ ಹಾಗೂ ಸಿಖ್ ಸಮುದಾಯಗಳನ್ನು ದರೋಡೆಕೋರರು ಎಂಬಂತೆ ಚಿತ್ರಿಸಲಾಗಿದೆ. ಹಿಂದೂ ದೇವರು-ದೇವತೆಗಳನ್ನು ಅಶ್ಲೀಲವಾಗಿ ಬಿಂಬಿಸಲಾಗಿದೆ. ಇದು ಅಸಹನೀಯವಾಗಿದ್ದು, ಇದರ ವಿರುದ್ಧವೂ ಪಕ್ಷ ಧ್ವನಿ ಎತ್ತಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಲೋಕಸಭಾ ವಿರೋಧ ಪಕ್ಷದ ಎಲ್.ಕೆ.ಅಡ್ವಾಣಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಹ ಉಪಸ್ಥಿತರಿದ್ದರು.
(ಯುಎನ್ಐ)
ಮುಖಪುಟ / ವಾರ್ತೆಗಳು