ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕನ್ನಡ ಕಂಪ್ಯೂಟರ್‌’ ಬಗ್ಗೆ ಅಗತ್ಯ ಮಾಹಿತಿ ಇಲ್ಲೀಗ ಲಭ್ಯ

By Staff
|
Google Oneindia Kannada News

‘ಕನ್ನಡ ಕಂಪ್ಯೂಟರ್‌’ ಬಗ್ಗೆ ಅಗತ್ಯ ಮಾಹಿತಿ ಇಲ್ಲೀಗ ಲಭ್ಯ
ಶನಿವಾರದಿಂದ ಸಾಹಿತ್ಯ ಪರಿಷತ್ತಿನಲ್ಲಿ ಮಹತ್ವದ ವಿಚಾರ ಸಂಕಿರಣ ಆರಂಭ

ಬೆಂಗಳೂರು : ಶನಿವಾರ ಮತ್ತು ಭಾನುವಾರ(ಆ.19,20) ಗಣಕದಲ್ಲಿ ಕನ್ನಡ ಬಳಕೆ ಕುರಿತು ಮಹತ್ವದ ಚರ್ಚೆಗಳು, ವಿಚಾರ ಸಂಕಿರಣಗಳು ನಗರದಲ್ಲಿ ನಡೆಯಲಿವೆ.

ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಗಣಕ ಪರಿಷತ್‌ ಜಂಟಿಯಾಗಿ ಈ ಕಾರ್ಯಕ್ರಮ ಸಂಘಟಿಸಿದ್ದು, ಕನ್ನಡ ಸಾಫ್ಟ್‌ವೇರ್‌ಗಳು, ಯುನಿಕೋಡ್‌ ಬಳಕೆ ಸೇರಿದಂತೆ ಅನೇಕ ವಿಚಾರಗಳು ಈ ಸಂದರ್ಭದಲ್ಲಿ ಚರ್ಚೆಗೆ ಬರಲಿವೆ. ಆಸಕ್ತರು ಪ್ರಯೋಜನ ಪಡೆಯುವಂತೆ ಪ್ರಕಟಣೆ ಕೋರಿದೆ.

ಕನ್ನಡದಲ್ಲಿ ಕಂಫ್ಯೂಟರ್‌ ವ್ಯವಹಾರ ನಡೆಯಬೇಕು ಎಂಬ ಆಶಯದೊಂದಿಗೆ ಈ ವಿಚಾರ ಸಂಕಿರಣಗಳನ್ನು ಆಯೋಜಿಸಲಾಗಿದೆ. ಈ ಸಂಬಂಧ ಒಟ್ಟು ಐದು ಗೋಷ್ಠಿಗಳು ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ನಡೆಯಲಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X