ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡ್ಡಿ ನಿವಾರಣೆ : ಸಂಸದರೇ, ಇನ್ನಾದರೂ ಕನ್ನಡ ಧ್ವನಿ ಎತ್ತಿ!

By Staff
|
Google Oneindia Kannada News

ಅಡ್ಡಿ ನಿವಾರಣೆ : ಸಂಸದರೇ, ಇನ್ನಾದರೂ ಕನ್ನಡ ಧ್ವನಿ ಎತ್ತಿ!
ಕನ್ನಡ ಭಾಷಾಂತರಕಾರ ಅಪ್ಪಾಜಿ ಗೌಡ ಸೇವೆ ಮುಂದುವರಿಕೆ

ನವದೆಹಲಿ : ಕರ್ನಾಟಕದ ಬೆರಳೆಣಿಕೆಯ ಕೆಲವರನ್ನು ಬಿಟ್ಟರೇ ಉಳಿದ ಸಂಸದರು, ಅಧಿವೇಶನಗಳಲ್ಲಿ ಬಾಯಿಯನ್ನೇ ಬಿಡುವುದಿಲ್ಲ. ಭಾಷಾಂತರಕಾರರ ಸಮಸ್ಯೆಯಿಂದ ಅವರ ಬಾಯಿ ಕಳೆದ ಕೆಲವು ತಿಂಗಳಿಂದ ಮತ್ತಷ್ಟು ಮುಚ್ಚಿಕೊಂಡಿತ್ತು!

ಪ್ರಸ್ತುತ ಕನ್ನಡ ಭಾಷಾಂತರಕಾರರ ಸಮಸ್ಯೆ ತಾತ್ಕಾಲಿಕವಾಗಿ ಬಗೆಹರಿದಿದೆ. ಕರ್ನಾಟಕ, ಕನ್ನಡಿಗ ಮತ್ತು ಕನ್ನಡಕ್ಕಾಗಿ ಸಂಸದರು ಧ್ವನಿ ಎತ್ತಲು ಈಗ ಅವಕಾಶ ಲಭ್ಯವಾಗಿದೆ. ಆದರೆ ನಮ್ಮ ಸಂಸದರು ಬಾಯಿ ಬಿಚ್ಚುವ ಪ್ರಯತ್ನ ಮಾಡುವರೇ ಎಂಬುದು ಸಂಶಯದ ಸಂಗತಿ!

ಕಳೆದ ಕೆಲವು ತಿಂಗಳಿಂದ ಸಂಸತ್ತಿನಲ್ಲಿ ಕನ್ನಡ ಅನುವಾದಕರ ಕೊರತೆ ಉಂಟಾಗಿತ್ತು. ಹೀಗಾಗಿ ಕನ್ನಡದಲ್ಲಿ ಮಾತನಾಡುವ ಸಂಸದರ ಹಕ್ಕನ್ನು ಕಸಿಯಲಾಗಿತ್ತು. ಆ ಸ್ಥಾನಕ್ಕೆ ಅಪ್ಪಾಜಿಗೌಡ ಅವರನ್ನು ಈಗ ಮರು ನೇಮಕ ಮಾಡಲಾಗಿದೆ. ಮುಂದಿನ ಆರು ತಿಂಗಳ ಕಾಲ ಅವರು ಕನ್ನಡ ಭಾಷಾಂತರಕಾರರಾಗಿ ಸೇವೆ ಸಲ್ಲಿಸಲಿದ್ದಾರೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X