‘ಗಾಯನ ಸಮಾಜ’ದಲ್ಲಿ 38ನೇ ಸಂಗೀತ ಸಮ್ಮೇಳನ
‘ಗಾಯನ
ಸಮಾಜ’ದಲ್ಲಿ
38ನೇ
ಸಂಗೀತ
ಸಮ್ಮೇಳನ
ಪ್ರತಿ
ದಿನ
ಬೆಳಗ್ಗೆ
ಸಂಗೀತ
ಸಂಬಂಧಿ
ವಿಚಾರ
ಗೋಷ್ಠಿ,
ರಾತ್ರಿ
ಸಂಗೀತ
ಸುಧೆ
ಕೃಷ್ಣರಾಜೇಂದ್ರ ರಸ್ತೆಯಲ್ಲಿರುವ ಗಾಯನ ಸಮಾಜದಲ್ಲಿ ಭಾನುವಾರ(ಸೆ.13) ಬೆಳಗ್ಗೆ 10ಗಂಟೆಗೆ ಸಮ್ಮೇಳವನ್ನು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸುವರು ಎಂದು ಸಮಾಜದ ಅಧ್ಯಕ್ಷ ಎಚ್.ಕಮಲನಾಥ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಇಲಾಖೆ ಕಾರ್ಯದರ್ಶಿ ಐ.ಎಂ.ವಿಠಲಮೂರ್ತಿ, ಮಹಾನಗರ ಪಾಲಿಕೆ ಅಧ್ಯಕ್ಷ ಕೆ.ಜೈರಾಜ್, ಗಾಯಕ ಟಿ.ಎನ್.ಶೇಷಗೋಪಾಲನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಸಮ್ಮೇಳನದ ಹಿನ್ನೆಲೆಯಲ್ಲಿ ಆ.14ರಿಂದ 20ರವರೆಗೆ ಪ್ರತಿ ದಿನ ಬೆಳಗ್ಗೆ 9.45ರಿಂದ 12.15ರವರೆಗೆ ಸಂಗೀತ ಸಂಬಂಧಿ ವಿಚಾರಗೋಷ್ಠಿಗಳು ನಡೆಯಲಿವೆ. ಮೈಸೂರು ಸದಾಶಿವರಾವ್, ವೀಣೆ ಶೇಷಣ್ಣ, ಮೈಸೂರು ವಸುದೇವಾಚಾರ್ಯ, ಮುತ್ತಯ್ಯ ಭಾಗವತ, ಜಯಚಾಮರಾಜ ಒಡೆಯರ್ ಸೇರಿದಂತೆ ವಿವಿಧ ಸಂಗೀತ ನಿಪುಣರ ಬಗೆಗೆ ಗಣ್ಯರು ಮಾತನಾಡಲಿದ್ದಾರೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು : 26506049, 26612244, 41208643.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು