ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಸನ-ಮಂಗಳೂರು ರೈಲು ಮಾರ್ಗಕ್ಕೆ ಗ್ರೀನ್‌ ಸಿಗ್ನಲ್‌

By Staff
|
Google Oneindia Kannada News

ಹಾಸನ-ಮಂಗಳೂರು ರೈಲು ಮಾರ್ಗಕ್ಕೆ ಗ್ರೀನ್‌ ಸಿಗ್ನಲ್‌
ಮೈಸೂರು-ಬೆಂಗಳೂರು ದ್ವಿಪಥ ರೈಲು ಮಾರ್ಗದ ಕಾಮಗಾರಿ ಸದ್ಯದಲ್ಲಿಯೇ ಆರಂಭ -ಕುಮಾರಸ್ವಾಮಿ

ಬೆಂಗಳೂರು : ಸಾರ್ವಜನಿಕರ ಬಹು ನಿರೀಕ್ಷಿತ ಹಾಸನ- ಮಂಗಳೂರು ರೈಲ್ವೆ ಮಾರ್ಗದ ಉದ್ಘಾಟನೆ ಸೆಪ್ಟೆಂಬರ್‌ನಲ್ಲಿ ನೆರವೇರಲಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕೇಂದ್ರ ರೈಲ್ವೆ ಸಚಿವ ಲಾಲು ಪ್ರಸಾದ್‌ ಯಾದವ್‌ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಈ ಬಗ್ಗೆ ತಮ್ಮ ದೆಹಲಿ ಪ್ರವಾಸದಲ್ಲಿ ಮಾತುಕತೆ ನಡೆಸಿದ್ದಾಗಿ ಹೇಳಿದರು.

ಗದಗ-ಬಾಗಲಕೋಟೆ, ಗುಲ್ಬರ್ಗಾ- ಬೀದರ್‌, ಕೊಟ್ಟೂರು-ಹರಿಹರ, ಶಿವಮೊಗ್ಗ-ತಾಳಗುಪ್ಪ ಮಾರ್ಗಗಳ ರೈಲ್ವೆ ಯೋಜನೆ ಬಗ್ಗೆ ಕೇಂದ್ರ ರೈಲ್ವೆ ಸಚಿವರು ನೆರವು ನೀಡುವುದಾಗಿ ಹೇಳಿದ್ದಾರೆ ಎಂದು ಕುಮಾರಸ್ವಾಮಿ, ಸದ್ಯದಲ್ಲಿಯೇ ಮೈಸೂರು-ಬೆಂಗಳೂರು ದ್ವಿಪಥ ರೈಲು ಮಾರ್ಗದ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X